Connect with us

Hi, what are you looking for?

Diksoochi News

ಕರಾವಳಿ

ಕುಂದಾಪುರ : ನೆಹರು ಮೈದಾನ ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸುವಂತೆ ತಹಶೀಲ್ದಾರ್ ಗೆ ಮನವಿ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ನೆಹರೂ ಮೈದಾನದ ಸ್ವಚ್ಛಗೊಳಿಸಿ, ಅಭಿವೃದ್ಧಿ ಪಡಿಸುವಂತೆ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಶಾಂತಿನಿಕೇತನ ವಾರ್ಡ್ ನ ಪುರಸಭಾ ಸದಸ್ಯೆ ವನಿತಾ ಬಿಲ್ಲವ ಮನವಿ ಸಲ್ಲಿಸಿದ್ದಾರೆ. ಹಿಂದಿನಿಂದಲೂ ನೆಹರೂ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಆಟ ಆಡಲು ಸೂಕ್ತ ಸ್ಥಳವಾಗಿದೆ. ಸಮೀಪದಲ್ಲೇ ಹಿಂದುಳಿದ ವರ್ಗಗಳ ವಸತಿ ನಿಲಯವಿದ್ದು, ಇತ್ತೀಚೆಗೆ ಆಟದ ಮೈದಾನ ಸ್ವಚ್ಛಗೊಳಿಸದೆ ಸುತ್ತ ಮುತ್ತಲಿನ ಪ್ರದೇಶ ದುರ್ನಾತ ಬೀರುತ್ತಿದೆ. ಪೊದೆಗಳು ಬೆಳೆದಿದ್ದು, ಹತ್ತಿರದ ವಿದ್ಯಾರ್ಥಿಗಳಿಗೆ ವಿಷಜಂತುಗಳು ಬರುವ ಸಾಧ್ಯವಿದೆ. ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಆಟವಾಡಲು ಮೈದಾನಕ್ಕೆ ಬರುತ್ತಾರೆ ಹಾಗೂ ಕೂಲಿ ಕಾರ್ಮಿಕರು ಮೈದಾನದ ಬಳಿ ಮಲಗುತ್ತಾರೆ. ಇದರಿಂದ ವಿಷಜಂತುಗಳಿಂದ ಅವರಿಗೆ ಅಪಾಯ ಆಗುವ ಸಾಧ್ಯತೆ ಇದೆ.
ಈ ಹಿಂದೆ ಆಡಳಿತ ಮಂಡಳಿಯವರು ಕುಂದಾಪುರ ತಾಲೂಕು ಕಛೇರಿಯ ಕಂದಾಯ ಇಲಾಖೆ ಅಧೀನದಲ್ಲಿರುವ ನೆಹರು ಮೈದಾನವನ್ನು ಪುರಸಭೆಗೆ ಹಸ್ತಾಂತರ ಮಾಡಬೇಕೆಂದು ಕೇಳಿಕೊಂಡಿರುತ್ತಾರೆ. ಆದರೆ, ಪುರಸಭೆಗೆ ಹಸ್ತಾಂತರವಾಗದೇ ಪುರಸಭೆಯವರಿಗೆ ಯಾವುದೇ ರೀತಿಯ ಅಭಿವೃದ್ಧಿ ಪಡಿಸುವುದಾಗಲೀ ಮಾಡಲು ಸಾಧ್ಯವಾಗುವುದಿಲ್ಲ. ಜನರು ನೆಹರು ಮೈದಾನವನ್ನು ಸ್ವಚ್ಛಗೊಳಿಸಿ ಸುತ್ತ ಆವರಣ ಗೋಡೆಯನ್ನು ನಿರ್ಮಿಸಿ ಮೈದಾನವನ್ನು ಸುರಕ್ಷಿಸಬೇಕೆಂದು ಕೇಳಿಕೊಂಡಿರುತ್ತಾರೆ. ಕಂದಾಯ ಇಲಾಖೆಯ ಅಧೀನದಲ್ಲಿರುವ ನೆಹರು ಮೈದಾನವನ್ನು ತಕ್ಷಣ ಸ್ವಚ್ಛಗೊಳಿಸಿ ಸುತ್ತಲೂ ಆವರಣ ಗೋಡೆ ನಿರ್ಮಿಸಿ ಮೈದಾನವನ್ನು ರಕ್ಷಿಸುವ ಹಾಗೂ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುವ ತೊಂದರೆಯನ್ನು ಸರಿಪಡಿಸಿಕೊಡಬೇಕಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!