Connect with us

Hi, what are you looking for?

Diksoochi News

ಕರಾವಳಿ

ದೀಪಾವಳಿಗೆ ಬರಲಿದೆ ಸ್ವದೇಶಿ ಗೋ ದೀಪ; ಪರಿಸರ ಪೂರಕ ಹಣತೆ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ದೀಪದಿಂದ ದೀಪವಾ, ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು ಎನ್ನುವ ಹಾಡಿನ ಸಾಲಿಗೆ ಪೂರಕವಾಗಿ ಈ ದೀಪವಾಳಿಗೆ ಪ್ರೀತಿಯಿಂದ ಮಾಡಿರುವ ಸ್ವದೇಶಿ ಗೋಮಾತೆಯ ಗೋಮಯದ ಜತೆಗೆ ಪಂಚಗವ್ಯದಿಂದ ತಯಾರಿಸಿದ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ದೀಪಗಳ ಹಬ್ಬ ಎಂದೇ ಬಣ್ಣಿಸಲ್ಪಡುವ ದೀಪಾವಳಿ ಹಬ್ಬಕ್ಕೆಂದು ಈ ಬಾರಿ ಬೀಜಾಡಿ ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಇವರು ಪಂಚಗವ್ಯ ಗೋ ದೀಪಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ. ಈ ಬಾರಿಯ ದೀಪಾವಳಿಯ ಹಬ್ಬದ ಜ್ಯೋತಿ ಕೇವಲ ಮನೆಯನ್ನು ಮಾತ್ರವಲ್ಲ ಆತ್ಮನಿರ್ಭರ ಭಾರತದ ಕಲ್ಪನೆಯ ಮೂಲಕ ರಾಷ್ಟ್ರದ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಪುಷ್ಟಿ ನೀಡುವಂತಿದೆ.
ಗೋಮಯ, ತುಪ್ಪ, ಮೊಸರು, ಹಾಲು, ಜೇಡಿಮಣ್ಣು ಮತ್ತು ಅರಿಶಿನವನ್ನು ಸೇರಿಸಿ ಈ ದೀಪವನ್ನು ತಯಾರು ಮಾಡಲಾಗುತ್ತಿದೆ. ಈ ದೀಪದ ಬಳಕೆಯ ನಂತರ ದೀಪದ ಬೂದಿಯು ಗೊಬ್ಬರವಾಗಿ ಉಪಯೋಗವಾಗಲಿದೆ.


ಪರಿಸರ ಮಾಲಿನ್ಯಕ್ಕೆ ತಡೆ: ಈಗಾಗಲೇ ಬೇರೆ ಬೇರೆ ಪ್ಲಾಸ್ಟಿಕ್ ಮತ್ತು ಸಿರಾಮಿಕ್ ದೀಪಗಳಿಂದ ಪರಿಸರ ಮಾಲಿನ್ಯವಾಗುವ ಮೂಲಕ ಮಾನವ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಇವೆಲ್ಲವನ್ನೂ ತಡೆಗಟ್ಟುವ ಸಲುವಾಗಿ ಗೋಶಾಲೆಯಲ್ಲಿ ವಿವಿಧ ರೀತಿಯ ಪ್ರಾಕೃತಿಕ ಬಣ್ಣಗಳಿಂದ ತಯಾರಿಸಿದ ಈ ಗೋ ದೀಪವು ಪರಿಸರ ಪೂರಕವಾಗಿ ಸಹಕರಿಯಾಗುತ್ತದೆ. ಇದರಿಂದ ಸ್ಥಳೀಯ ಮಾರಾಟಗಾರರಿಗೆ ಲಾಭದ ಜೊತೆ ಪರಿಸರ ಮಾಲಿನ್ಯವನ್ನು ತಡೆಯುವ ಮೂಲಕ ಪ್ರಾಣಿ ಮತ್ತು ಪಕ್ಷಿಗಳಿಗೂ ಅನುಕೂಲವಾಗಲಿದೆ.
ಆತ್ಮನಿರ್ಭರ ಭಾರತದ ಕಲ್ಪನೆ: ಪಂಚಗವ್ಯ ಗೋಮಯ ದೀಪಗಳು ಶುದ್ಧ ಗೋಮಯ ಮತ್ತು ದೇಸಿ ತುಪ್ಪಗಳ ಬಳಕೆಯಿಂದ ತಯಾರಿಸಲಾದ ಹಣತೆಗಳಿವು. ಈ ದೀಪಗಳ ಬಳಕೆಯಿಂದ ಪರಿಸರವನ್ನು ಶುದ್ಧೀಕರಿಸುತ್ತದೆ. ಈ ಬಾರಿ ದೀಪಾವಳಿ ಹಬ್ಬವನ್ನು ಗೋಮಯ ಹಣತೆಗಳಿಂದ ಆಚರಿಸುವ ಮೂಲಕ ಗೋಶಾಲೆಗಳಿಗೆ ಆರ್ಥಿಕವಾಗಿ ನೆರವು ನೀಡುತ್ತ ಸ್ವದೇಶಿ ಆತ್ಮ ನಿರ್ಭರ ಭಾರತದ ಕಲ್ಪನೆಯಲ್ಲೊಂದಾಗಿದೆ.

ಈ ದೀಪವನ್ನು ಹಚ್ಚುವುದರ ಮೂಲಕ ಮನೆಯ ಪರಿಸರದಲ್ಲಿ ನಕಾರತ್ಮಕ ಶಕ್ತಿಯನ್ನು ಓಡಿಸಿ ಸಕಾರತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವ ಮಾತು ಪುರಾಣ ಕಥೆಗಳಲ್ಲಿ ಉಲ್ಲೇಖವಿದೆ. ಗೋಮಯೆ ವಸತೇ ಲಕ್ಷ್ಮೀ ಎಂಬಂತೆ ಈ ದೀಪಕ್ಕೆ ತುಪ್ಪ ಮತ್ತು ಬತ್ತಿಯನ್ನು ಹಾಕಿ ಹಚ್ಚಿದಾಗ ಒಂದು ವಿಶೇಷ ತರಂಗಾಂತರ ಸೃಷ್ಟಿ ಆಗುತ್ತದೆ. ಎಣ್ಣೆಯನ್ನು ಹೀರಿಕೊಳ್ಳದ ಪೂರ್ಣವಾಗಿ ಉರಿಯುವ ದೀಪವಾಗಿದ್ದು ತುಂಬ ಹೊಳಪು ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ.

ಆಧ್ಯಾತ್ಮಿಕ ಮತ್ತು ಸ್ವಚ್ಚ ಭಾರತ ದೃಷ್ಟಿಯಿಂದಲೂ ಈ ದೀಪವು ಉಪಯೋಗವಾಗಲಿದೆ. ಈ ದೀಪವನ್ನು ವ್ಯವಹಾರದ ದೃಷ್ಟಿಯಿಂದ ಮಾಡುತ್ತಿಲ್ಲ. ಬದಲಾಗಿ ಗೋಮಾತೆ ಹಾಗೂ ಗೋಶಾಲೆ ಉಳಿಸುವ ದೃಷ್ಟಿಯಿಂದ ಮತ್ತು ಸ್ವದೇಶಿ ಕಲ್ಪನೆಯ ಅಂಗವಾಗಿ ಪರಿಸರ ಪೂರಕವಾಗಿ ನಡೆಸಲಾಗುತ್ತಿದೆ. ಒಂದು ಪ್ಯಾಕೆಟ್‍ನಲ್ಲಿ 12 ಹಣತೆಗಳಿರುವ ಇದರ ಬೆಲೆ 70 ರೂಪಾಯಿಗಳಾಗಿವೆ.

Advertisement. Scroll to continue reading.
ಕುಮಾರ್ ಕಾಂಚನ್, ಸಂಚಾಲಕರು, ಕಪಿಲೆ ಗೋ ಸಮೃದ್ಧಿ ಟ್ರಸ್ಟ್, ಬೀಜಾಡಿ

ಸನಾತನ ಹಿಂದೂ ಸಂಸ್ಕೃತಿಯಲ್ಲಿ ದೀಪಗಳಿಗೆ ವಿಶೇಷ ಪ್ರಾತಿನಿಧ್ಯತೆಯಿದೆ. ಋಷಿಮುನಿಗಳು ಮತ್ತು ವೇದಗಳ ಕಾಲದಿಂದಲೂ ಗೋಮಯಗಳಿಗೆ ಮಹತ್ವವಿದೆ. ಗೋಮಾಯೆ ವಸತೇ ಲಕ್ಷ್ಮೀ ಎಂಬಂತೆ ದೀಪಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ಇತಂಹ ಶ್ರೇಷ್ಟ ಹಣತೆಗಳಲ್ಲಿ ಲಕ್ಷ್ಮೀ ದೇವಿಯನ್ನು ಕಾಣಬಹುದು ಎಂಬ ಪ್ರತೀತಿ ಇದೆ. ದೀಪಾವಳಿ ಹಬ್ಬದಲ್ಲಿ ಗೋದೀಪಗಳ ಬಳಕೆ ಹೆಚ್ಚಾಗಿ ಮಾಡುತ್ತೇವೆ. ದೀಪಗಳ ಬಳಕೆಯ ನಂತರ ಹೋಮ ಹವನ ಮಾಡಿದ ರೀತಿಯಲ್ಲಿ ಅನುಭವದ ಜತೆಗೆ ಸುವಾಸನೆ ಬರುತ್ತದೆ. ಇದರಿಂದ ಮನಸ್ಸಿನಗೆ ನೆಮ್ಮದಿ ಮತ್ತು ಖುಷಿ ನೀಡುತ್ತದೆ.ಅಶ್ವಿನಿ ಪುರಂದರ್ ತೆಕ್ಕಟ್ಟೆ, ಗ್ರಾಹಕಿ

Click to comment

Leave a Reply

Your email address will not be published. Required fields are marked *

You May Also Like

ಅರೆ ಹೌದಾ!

1 ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯ ವೇಷವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ....

ರಾಷ್ಟ್ರೀಯ

0 ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿರಿಯ ವಕೀಲ...

ರಾಷ್ಟ್ರೀಯ

0 ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ ‘ಶುಗರ್’ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ...

ರಾಜ್ಯ

0 ಮಂಡ್ಯ: ಐಸ್ ಕ್ರೀಮ್ ಸೇವನೆ ಮಾಡಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್...

ರಾಜ್ಯ

1 ಹುಬ್ಬಳ್ಳಿ : ಕಾರ್ಪೋರೇಟರ್ ನಿರಂಜನ್ ಹಿರೇಮಠ ಎಂಬವರ ಮಗಳನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದಿದೆ.ನೇಹಾ ಹಿರೇಮಠ ಹತ್ಯೆಯಾದ ವಿದ್ಯಾರ್ಥಿನಿ. ಕಾಲೇಜ್ ಕ್ಯಾಂಪಸ್ ನಲ್ಲಿರುವ ಕ್ಯಾಂಟೀನ್ ನಲ್ಲಿ...

error: Content is protected !!