Connect with us

Hi, what are you looking for?

Diksoochi News

Uncategorized

ಸರ್ಕಾರಿ ಶಾಲೆಯ ಸೊಬಗ ಕಂಡು ಬೆರಗಾದರು ಮತದಾರರು

1

ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಮತಗಟ್ಟೆ ತೆರೆಯಲಾಗಿತ್ತು. ಶಾಲೆಯ ಉದ್ಯಾನವನ, ಕೈ ತೋಟ, ಕಲಾಕೃತಿಗಳ ರಚನೆಯ ಸೊಬಗ ಕಂಡು ನಿಬ್ಬೆರಗಾಗದವರಿಲ್ಲ.

ಅಷ್ಟೊಂದು ಚೆಂದವಿದೆ ಇಲ್ಲಿನ ವಾತಾವರಣ. ಮನಕ್ಕೆ ಮುದ ಕೊಡುವ ಚೆಲುವು ಅರಳಿ ನಲಿಯುತ್ತಿದೆ. ಹಾಗಾಗಿ ಮತ ಚಲಾಯಿಸಲು ಬಂದವರು ಅರೆ ಕ್ಷಣ ಬೆರಗಾದುದರಲ್ಲಿ ಆಶ್ಚರ್ಯವಿಲ್ಲ.

ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ಧನ್ ರವರೂ ಖುಷಿ ಪಟ್ಟು ಭಾವಚಿತ್ರ ತೆಗೆಸಿಕೊಂಡರು. ಅಲ್ಲದೇ, ಶಾಲೆಯ ಸೌಂದರ್ಯ ಹೆಚ್ಚಿಸಿರುವ ಕಲಾ ಶಿಕ್ಷಕ ಮೋಹನ್ ಕಡಬ ರವರ ಕಾರ್ಯ ವೈಖರಿಗೆ ಮೆಚ್ಚುಗೆ ಸೂಚಿಸಿದರು.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಪೆರ್ಡೂರು : ಆರ್‌.ಸಿ.ಸಿ ಬೆಳ್ಳರ್ಪಾಡಿ, ರೋಟರಿ ಕ್ಲಬ್ ಮಣಿಪಾಲ ಟೌನ್, ಕರ್ನಾಟಕ ಅರಣ್ಯ ಇಲಾಖೆ ಹೆಬ್ರಿ ವಲಯ ಪೆರ್ಡೂರು ಶಾಖೆ ಇವರ ಸಹಯೋಗದಲ್ಲಿ ವನಮಹೋತ್ಸವ, ಸಸಿ ವಿತರಣೆ ಮತ್ತು ಸನ್ಮಾನ ಸಮಾರಂಭ...

error: Content is protected !!