ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋರವರು ಬಾರಕೂರು ಸಂತ ಪೀಟರ್ ಚರ್ಚ್ಗೆ ಎರಡು ದಿನದ ಅಧಿಕೃತ ಭೇಟಿ ನೀಡಿದರು.
ಈ ಸಂದರ್ಭ ಚರ್ಚ್ ನ ಅಂತರ ಧರ್ಮೀಯ ಸಂವಾದ ಆಯೋಗದಡಿಯಲ್ಲಿ ಬಾರಕೂರಿನ ಕ್ರೈಸ್ತೇತರ ಮುಖಂಡರ ಜೊತೆ ಸೌಹಾರ್ದ ಕೂಟ ಜರುಗಿತು.
ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷರು ಮಾತನಾಡಿ, ಬಾರಕೂರು ಅನೇಕ ದೇವಾಲಯಗಳ ನಗರ ಎಲ್ಲಾ ಜಾತಿ ಮತ ಪಂತ ಧರ್ಮದ ಇಲ್ಲಿನ ಜನರಂತೆ ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಬಾಳುವುದು ದೇಶಕ್ಕೆ ಮಾದರಿ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಜ್ಯಾವೆಲಿನ್ ಕ್ರೀಡಾಗಾರ್ತಿ ಬಾರಕೂರಿನ ಕುಮಾರಿ ಕರಿಷ್ಮಾ ಸನಿಲ್, ಶಿಕ್ಷಣ ಕ್ಷೇತ್ರದ ಬಿ.ಸುಧಾಕರ್ ರಾವ್ ಹಾಗೂ ಶಿಕ್ಷಣ ಹಾಗೂ ಪರಿಸರ ಕ್ಷೇತ್ರದ ಸಾಧಕ ಬಿ.ಸೀತಾರಾಮ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಬಾರಕೂರು ಗ್ರಾಮಪಂಚಾಯತ್ ಅಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ, ಚರ್ಚಿನ ಧರ್ಮಗುರುಗಳಾದ ವಂದನೀಯ ಗುರು ಫಿಲಿಪ್ ನೆರಿ ಆರಾನ್ಹಾ, ಅಂತರಧರ್ಮೀಯ ಸಂವಾದ ಆಯೋಗದ ಸಂಚಾಲಕ ಜೆರಾಲ್ಡ್ ಗೊನ್ಸಾಲ್ವಿಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಹೆರಾಲ್ಡ್ ಡಿಸೋಜಾ, ಕಾರ್ಯದರ್ಶಿ ವಿವೆಟ್
ಲುವಿಸ್, 20 ಆಯೋಗಗಳ ಸಂಯೋಜಕ ಎರಿಕ್ ಸೋನ್ಸ್ ಮತ್ತು ಎಲ್ಲಾ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.