Connect with us

Hi, what are you looking for?

Diksoochi News

ಕರಾವಳಿ

ಪಟ್ಲ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಿರಬೇಕು : ಜ್ಯೋತಿ ಮಹಾದೇವ್

0

ಪಟ್ಲ : ವಿದ್ಯಾರ್ಥಿಗಳು ನಿರಂತರವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಣ್ಣಿನೊಂದಿಗೆ ಅವರ ಸತತ ಒಡನಾಟವಿರಬೇಕು. ನಿರಂತರ ಅಧ್ಯಯನಶೀಲರಾಗಬೇಕು ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಈ ಎಲ್ಲಾ ಅಂಶಗಳು ಪೂರಕ ಎಂದು ಕವಯಿತ್ರಿ, ಬರಹಗಾರ್ತಿ ಜ್ಯೋತಿ ಮಹಾದೇವ್ ಹೇಳಿದರು.

ಅವರು ಪಟ್ಲ ಯು.ಎಸ್.ಪ್ರೌಢಶಾಲೆ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 


ಸಂಸ್ಥೆಯ ಮುಖ್ಯ ಶಿಕ್ಷಕ ಶ್ರೀಕಾಂತ ಪ್ರಭು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಚ್.ಎನ್.ನಟರಾಜ್ ಮತ್ತು ಶಾಂತಪ್ಪ ಮೂಲಂಗಿ ಇವರಿಂದ ವಚನಗಳ ಗಾಯನ-ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.
ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ರಥಬೀದಿ ಗೆಳೆಯರು ಉಡುಪಿ ಇವರ ಪ್ರಾಯೋಜಕತ್ವ ದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿ ನಾಯಕ ಬಸನಗೌಡ ಸ್ವಾಗತಿಸಿದರು.ಅನ್ವಿತಾ ವಂದಿಸಿದರು. ಸುಕನ್ಯಾ ಕಾರ್ಯಕ್ರಮ ನಿರೂಪಿಸಿದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!