ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಎಲ್ಲರೂ ಲಾಭಕ್ಕಾಗಿ, ಹಣ ಮಾಡುವ ಉದ್ದೇಶದಿಂದ ವ್ಯವಹಾರ ನಡೆಸಿದರೆ ಕುಂದಾಪುರದ ಅಮ್ಮ ಪಟಾಕಿ ಮೇಳ ಭಿನ್ನವಾಗಿದೆ,ಅಶಕ್ತರಿಗೆ ನೆರವು ನೀಡುವ ಕೆಲಸ ಮಾಡುತ್ತಿದೆ. ಹಾಗಾಗಿ ವ್ಯಾಪಾರ ಹೆಚ್ಚಾಗಲಿ ಎಂದು ಆಶಿಸುತ್ತೇನೆ ಎಂದು ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಹೇಳಿದರು. ಅವರು ಅಮ್ಮ ಪಟಾಕಿ ಮೇಳದ ಆಶಕ್ತರಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನ್ಯಾಯವಾದಿ ವಿಕಾಸ್ ಹೆಗ್ಡೆ ಮಾತನಾಡಿ, ಲಾಭದ ದೃಷ್ಟಿಯಿಂದ ಎಲ್ಲರೂ ಪಟಾಕಿ ಮಾರಾಟ ಮಾಡುತ್ತಾರೆ ಹೊರತು ಸಮಾಜಸೇವೆ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ಪಾಲು ಕೊಡುವ ಕೆಲಸ ಯಾರೂ ಮಾಡುವುದಿಲ್ಲ. ಆದರೆ, ತಾವು ಸಮಾಜದಲ್ಲಿ ಕಾಣುತ್ತಿರುವ ವ್ಯವಸ್ಥೆಗೆ ಸಹಾಯ ಮಾಡುವ ಉದ್ದೇಶ ಅಮ್ಮ ಮೇಳದ ಸಹೋದರರದು.ವ್ಯಾಪಾರದ ಒಂದು ಭಾಗವನ್ನು ನೀಡುತ್ತಿರುವುದು ಶ್ಲಾಘನೀಯ ” ಎಂದರು.
ಕಳೆದ ಮೂರು ವರ್ಷಗಳಿಂದ ಅಮ್ಮ ಪಟಾಕಿ ಮೇಳ ಅಶಕ್ತರಿಗೆ ಸಹಾಯಧನ ವಿತರಿಸುತ್ತಿದ್ದು, ಈ ಬಾರಿ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಹಂಗಳೂರಿನ ಶಂಕರ್ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು.
ಈ ಸಂದರ್ಭ ತಕಬಾ ಸಂಸ್ಥೆ ಪಾಲುದಾರ ಕಿರೀಟ್ ಶೆಟ್ಟಿ, ಶಶಿರಾಜ್, ವಿಶ್ವರಾಜ್, ಅಮ್ಮಾ ಪಟಾಕಿ ಮೇಳ ಪಾಲುದಾರ ವಿಜಯ್ ಅಂಕದಕಟ್ಟೆ, ನಟರಾಜ್, ಪ್ರಶಾಂತ್, ಪ್ರಸಾದ್, ಕಿರಣ್, ನಾಗೇಶ್, ನಾಗರಾಜ್, ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.