Connect with us

Hi, what are you looking for?

Diksoochi News

ಕರಾವಳಿ

ಅಮೃತ ಗ್ರಾಮ ಯೋಜನೆಗೆ ಸಿದ್ದಾಪುರ ಗ್ರಾಮ ಪಂಚಾಯತ್ ಸೇರ್ಪಡೆ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ರಾಜ್ಯ ಸರ್ಕಾರವು ಅಮೃತ ಗ್ರಾಮೀಣ ವಸತಿ ಯೋಜನೆ ಘೋಷಿಸಿದ್ದು, ಗ್ರಾಪಂಗಳ ವ್ಯಾಪ್ತಿಯಲ್ಲಿ ವಸತಿ ರಹಿತ ಮತ್ತು ಆಶ್ರಯ ರಹಿತರನ್ನು ಗುರುತಿಸಿ ವಸತಿ ಕಲ್ಪಿಸಲು, ಅಮೃತ ಗ್ರಾಮ ಯೋಜನೆಗೆ ಸಿದ್ದಾಪುರ ಗ್ರಾಪಂ ಕ್ಷೇತ್ರ ಶಾಸಕರ ಶಿಫಾರಸ್ಸಿನ ಮೇರೆಗೆ ಆಯ್ಕೆ ಆಗಿದೆ.

ಶೇಖರ್ ಕುಲಾಲ್, ಗ್ರಾ.ಪಂ ಅಧ್ಯಕ್ಷ

ಈ ಬಗ್ಗೆ ಮಾತನಾಡಿದ ಸಿದ್ದಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಕುಲಾಲ್, ಸಿದ್ಧಾಪುರ ಗ್ರಾ.ಪಂ. ದೊಡ್ಡ ಗ್ರಾ.ಪಂ.ಆಗಿದ್ದು. 19 ಜನ ಸದಸ್ಯರನ್ನು ಹೊಂದಿದೆ. 8,000ಕ್ಕೂ ಅಧಿಕ ಜನರಿದ್ದು. 1400ಕ್ಕೂ ಅಧಿಕ ಮನೆಗಳಿವೆ. ಪ್ರತೀ ವಾರ್ಡಿನ ಎಲ್ಲಾ ಮನೆಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಸ್ ಎಲ್ ಆರ್ ಘಟಕ, ಕಸ ನಿರ್ವಹಣೆಗೆ ನಾವು ಸ್ವಂತ ವಾಹನವನ್ನು ಹೊಂದಿದ್ದು, 8 ಜನ ಕಾರ್ಮಿಕರಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಕಸ ಸಂಗ್ರಹಿಸುತ್ತಿದ್ದೇವೆ. ಹಾಗೆಯೇ ಸಂಜೀವಿನಿ ತಂಡದಿಂದ ಅತ್ಯುತ್ತಮ ಕೆಲಸಗಳಾಗುತ್ತಿದೆ. ಅವರು ತಾವೇ ತಯಾರಿಸಿದ ವಸ್ತುಗಳನ್ನು ವಾರದ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಾಗೆಯೇ ಜಲ ಜೀವನ್ ನ 39 ಲಕ್ಷದ ಫೈನನ್ಸ್ ನ ಬಜೆಟ್ ಮಾಡಿದ್ದು, ಅದರಲ್ಲಿ ಜನಜೀವನ್ ಮಿಷನ್ ಗೂ ನೀಡಿದ್ದೇವೆ. 2 ಕೋಟಿ 38 ಲಕ್ಷದ 27 ಸಾವಿರ ನರೇಗಾ ಯೋಜನೆಗಾಗಿ ಬಜೆಟ್ ಮಂಜೂರು ಮಾಡಿಸಿಕೊಂಡಿದ್ದೇವೆ. ಹೆಚ್ಚಿನ ಸ್ವಚ್ಛತೆಗೆ ನಾವು ಗಮನ ಕೊಡುತ್ತಿದ್ದೇವೆ. ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರೋಹಿತ್ ಶೆಟ್ಟಿ ನೆರವಿನಿಂದ ಸರ್ಕಲ್ ಮಂಜೂರಾಗಿದೆ. ಹಾಗೆಯೇ ಬಹುತೇಕ ರಸ್ತೆಗಳು ಶಾಸಕರ ನಿಧಿಯಿಂದ ಹಾಗೂ ಸದಸ್ಯರ ನಿಧಿಯಿಂದ ಕಾಂಕ್ರೀಟೀಕರಣಗೊಂಡಿದೆ. ಬೀದಿ ದೀಪಕ್ಕೂ ಪಂಚಾಯತ್ ಆಯವ್ಯಯದಲ್ಲಿ ಹಣ ಇಟ್ಟಿದ್ದೇವೆ. ಇನ್ನೂ ಅನೇಕ ಕಾಮಗಾರಿಗಳು ಗ್ರಾಮ ಸಡಕ್ ನಲ್ಲಿ ಬಂದಿವೆ. ಈ ಎಲ್ಲಾ ಅಭಿವೃದ್ಧಿಯನ್ನು ಕಂಡಂತಹ ಶಾಸಕ ಸುಕುಮಾರ್ ಶೆಟ್ಟಿ ಗ್ರಾಮವನ್ನು ಸಮೃದ್ಧ ಯೋಜನೆಯಲ್ಲಿ ಸೇರ್ಪಡೆ ಮಾಡಿದ್ದಾರೆ. ಸಮೃದ್ಧ ಯೋಜನೆಯಲ್ಲಿ 500ಕ್ಕೂ ಹೆಚ್ಚಿನ ಬೇಡಿಕೆ ಇದೆ. ಐನೂರಕ್ಕೂ ಹೆಚ್ಚು ವಸತಿ ರಹಿತರ ಅರ್ಜಿ ಇದೆ.‌ಹಂತ ಹಂತವಾಗಿ ಬೇರೆ ಬೇರೆ ಯೋಜನೆಗಳಲ್ಲಿ ವಸತಿ ರಹಿತರಿಗೆ ವಸತಿ ಯೋಜನೆಯಡಿ ಮನೆ ಮಂಜೂರು ಮಾಡುತ್ತೇವೆ ಎಂದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!