ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೆಳನ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪತ್ರಕರ್ತರ ವೇದಿಕೆ ಬೆಂಗಳೂರು ಇವರ ವತಿಯಿಂದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವಕ್ಕೆ ಚಿತ್ರಕಲಾ ವಿಭಾಗದಲ್ಲಿ ಉತ್ತಮ ಸಾಧನೆಗಾಗಿ ಮತ್ತು ಬಹುಮುಖ ಪ್ರತಿಭೆಯ ನೆಲೆಯಲ್ಲಿ ಧೃತಿ ಎಸ್. ಉಡುಪಿಗೆ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ -2021 ಪ್ರಶಸ್ತಿಯನ್ನು ನೀಡಲಾಗಿದೆ.
ಇತ್ತೀಚೆಗೆ ಅಜೆಕಾರು ಕುರ್ಪಾಡಿ ಆದಿ ಗ್ರಾಮೋತ್ಸವ ಮಂಟಪದಲ್ಲಿ ಜರುಗಿದ ಸಮಾರಂಭದಲ್ಲಿ ಡಾ. ಶೇಖರ ಅಜೆಕಾರು, ಡಾ. ಸಂತೋಷ ಕುಮಾರ್, ಅರುಣ್ ಭಟ್ ಎಣ್ಣೆಹೊಳೆ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಶ್ವನಾಥ್ ಶಣೈ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಾವರ ಜಿಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನ ಆರನೇ ತರಗತಿಯ ವಿದ್ಯಾರ್ಥಿನಿಯಾದ ಧೃತಿ, ಪೋಲಿಸ್ ಇಲಾಖೆಯಲ್ಲಿರುವ ಉಡುಪಿ ತೆಂಕನಿಡಿಯೂರು ಸಂತೋಷ್ ಪೂಜಾರಿ ಹಾಗೂ ಪ್ರೀತಿ ಸುವರ್ಣರ ಪುತ್ರಿ.
Advertisement. Scroll to continue reading.