Connect with us

Hi, what are you looking for?

Diksoochi News

ಕರಾವಳಿ

ಕುಂದಾಪುರ : ಪ್ರತಾಪಚಂದ್ರ ಶೆಟ್ಟಿ ಅವರನ್ನು ಮತ್ತೊಮ್ಮೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಅಜಿತ್ ಶೆಟ್ಟಿ ಮನವಿ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಪಂಚಾಯತ್ ಸದಸ್ಯರೇ ಪಕ್ಷ ಭೇದ ಮರೆತು ಯಾವುದೇ ಕಪ್ಪು ಚುಕ್ಕಿ ಇಲ್ಲದೆ, ತನಗೆ ಬರುವ ಅನುದಾನದಲ್ಲಿ ಯಾವ ಪಂಚಾಯತ್ ಗೂ ತಾರತಮ್ಯ ಮಾಡದೆ, ಸಮಾನವಾಗಿ ಹಂಚಿದ ಹಾಗೂ ಯಾವುದೇ ಡೀಲ್ ಗಳಿಗೆ ಆಸ್ಪದ ಕೊಡದೆ ಇರುವಂತಹ ರಾಜಕಾರಣಿ ನಮ್ಮ ಪ್ರತಾಪ್ ಅಣ್ಣಾ. ಇನ್ನೊಮ್ಮೆ ವಿಧಾನಪರಿಷತ್ ಸದಸ್ಯರಾದರೆ ಮಾತ್ರ ಪ್ರತಿ ಪಂಚಾಯತ್ ಸದಸ್ಯರ ಗೌರವ ಹೆಚ್ಚುವುದು. ನಿಮ್ಮೆಲ್ಲರ ಧ್ವನಿ ಕಾಂಗ್ರೆಸ್ ಹೈ ಕಮಾಂಡ್ ಗೆ ಮುಟ್ಟಿ ಅವರಾಗಿಯೇ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡುವಂತಾಗಲಿ.
ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ ಶಿವುಕುಮಾರ್ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅತೀ ಶೀಘ್ರದಲ್ಲಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿ ಅವರ ಮನವೊಲಿಸಿ ಅಭ್ಯರ್ಥಿಯನ್ನಾಗಿಸದೇ ಇದ್ದಲ್ಲಿ ಕರಾವಳಿಯಲ್ಲಿ ನಮ್ಮ ಪಕ್ಷಕ್ಕೆ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬಹಳ ದೊಡ್ಡ ಹಿನ್ನಡೇ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ ಶಿವುಕುಮಾರ್ ಅವರಿಗೆ ಪ್ರತಾಪಚಂದ್ರ ಶೆಟ್ಟಿ ಅವರನ್ನು ಮತ್ತೊಮ್ಮೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಅಗ್ರಹಿಸಿದ್ದಾರೆ.

Ajith Kumar Shetty

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!