Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ

0

ವರದಿ : ಬಿ.ಎಸ್.ಆಚಾರ್ಯ

ಉಡುಪಿ : ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಭಾನುವಾರ 7 ತಾಲೂಕಿನ 8 ಮತಗಟ್ಟೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮತ್ತು ರಾಜ್ಯ ಅಧ್ಯಕ್ಷರ ಚುನಾವಣೆ ನಡೆಯಿತು.
ಕಳೆದ ಹತ್ತು ವರ್ಷದಿಂದ ಅಧ್ಯಕ್ಷರಾಗಿದ್ದ ನಿವೃತ್ತ ಶಿಕ್ಷಕ ನೀಲಾವರ ಸುರೇಂದ್ರ ಅಡಿಗರು ಈಬಾರಿ ಕೂಡಾ ಜಿಲ್ಲಾ ಅಧ್ಯಕ್ಷಗಾದಿಗೆ ಸ್ವರ್ಧೆಯಲ್ಲಿದ್ದರೆ, ಬ್ರಹ್ಮಾವರ ಕುಂಜಾಲಿನ ಸುಬ್ರಹ್ಮಣ್ಯ ಬಾಸ್ರಿ ಮತ್ತು ಬೈಂದೂರಿನ ಡಾ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧೆಯಲ್ಲಿದ್ದರು.


ಉಡುಪಿ ಜಿಲ್ಲೆಯಲ್ಲಿ ಒಟ್ಟು 1987 ಮತದಾರರಿದ್ದು, 254 ಬೈಂದೂರು, 435 ಕುಂದಾಪುರ , 302 ಕೋಟ , 140 ಬ್ರಹ್ಮಾವರ ,451 ಉಡುಪಿ,136 ಕಾಪು , 135 ಹೆಬ್ರಿ 134 ಕಾರ್ಕಳ ಮತದಾರಿದ್ದಾರೆ.
ಬ್ರಹ್ಮಾವರ ತಾಲೂಕಿನಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತಿ ಮತ್ತು ಬ್ರಹ್ಮಾವರ ತಾಲೂಕು ಕಛೇರಿಯಲ್ಲಿ ಮತದಾನ ನಡೆಯಿತು.


ಈ ಸಂದರ್ಬ ತಹಶೀಲ್ದಾರ ರಾಜಶೇಖರ ಮೂರ್ತಿ ಮತಗಟ್ಟೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಬ ಅವರು ಮಾತನಾಡಿ ಬ್ರಹ್ಮಾವರ ಭಾಗದಲ್ಲಿ ಮಧ್ಯಾಹ್ನ ತನಕ ಶೇಕಡಾ 50 ಮತದಾನ ನಡೆದಿದೆ ಸಂಜೆ ಮತ ಎಣಿಕೆ ಕಾರ್ಯ ನಡೆದು ವಿಜೇತರ ಹೆಸರನ್ನು ಘೋಷಿಸಲಾಗುವುದು ಎಂದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!