ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕನಕದಾಸರು ನಮ್ಮ ಹೆಮ್ಮೆ, ದಾಸ ಸಾಹಿತ್ಯದ ಮೂಲಕ ಇಡೀ ಸಮಾಜದ ಬದಲಾವಣೆಗೆ ನಾಂದಿ ಹಾಡಿದವರು. ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸುವುದೆಂದರೆ ಹೆಮ್ಮೆಯ ಸಂಗತಿ ಎಂದು ಹೆಬ್ರಿ ತಹಶೀಲ್ದಾರ್ ಪುರಂದರ ಕೆ. ಹೇಳಿದರು.
ಅವರು ಹೆಬ್ರಿ ತಾಲೂಕು ಆಡಳಿತ ವತಿಯಿಂದ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
Advertisement. Scroll to continue reading.
ಜಾತಿಪದ್ಧತಿ ಹಾಗೂ ಜಾತೀಯತೆಯ ಬಗ್ಗೆ ಧ್ವನಿ ಎತ್ತಿ ಶೋಷಿತ ಸಮುದಾಯದ ಪರ ನಿಂತವರು ದಾಸರು, ಇವರ ಆದರ್ಶವನ್ನು ಪ್ರತಿಯೊಬ್ಬ ನಾಗರಿಕನು ಅಳವಡಿಸಿಕೊಂಡಾಗ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಪುರಂದರ ಅವಲೋಕಿಸಿದರು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಸುಜ್ಯೋತಿ, ಕಂದಾಯ ನಿರೀಕ್ಷಕ ಹಿತೇಶ್, ಫುಡ್ ಇನ್ಸ್ಪೆಕ್ಟರ್ ಗುರುಪ್ರಸಾದ್, ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.