ವರದಿ : ದಿನೇಶ್ ರಾಯಪ್ಪನಮಠ
ಉಳ್ತೂರು : ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ತೆಕ್ಕಟ್ಟೆ ಇವರ ಆಶ್ರಯದಲ್ಲಿ ಭಾನುವಾರ ಉಳ್ತೂರಿನ ಬೇಳೂರು ಕ್ರಾಸ್ ಮೈದಾನದಲ್ಲಿ ನಡೆದ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ (ಲಯನ್ಸ್ ಹಣ್ಣಿನ ವನ) ಜರುಗಿತು. ಲಯನ್ಸ್ ಜಿಲ್ಲಾ ಟ್ರೀ ಪ್ಲಾಂಟೇಶನ್ ಚೀಫ್ ಕೋ ಅರ್ಡಿನೇಟರ್ ಎಮ್.ಸೀತಾರಾಮ್ ಶೆಟ್ಟಿ ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಲಯನ್ಸ್ ಅಧ್ಯಕ್ಷ ಕೆ.ಧರ್ಮರಾಜ ಮೊದಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕೆದೂರು ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಶೆಟ್ಟಿ, ಉಳ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಪ್ರತಾಪ್ ಶೆಟ್ಟಿ, ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಶಂಕರ ಶೆಟ್ಟಿ, ಸದಾರಾಮ ಶೆಟ್ಟಿ, ಜಯಕರ ಹೆಗ್ಡೆ, ಅರುಣ ಕುಮಾರ್ ಶೆಟ್ಟಿ, ಅಧ್ಯಾಪಕ ರಾಜೇಂದ್ರ ಶೆಟ್ಟಿ, ಗಗನ್ ಶೆಟ್ಟಿ, ನವೀನ್ ಶೆಟ್ಟಿ, ಹಿರಿಯರಾದ ಭುಜಂಗ ಶೆಟ್ಟಿ ಉಪಸ್ಥಿತರಿದ್ದರು. ಲಯನ್ಸ್ ಜಿಲ್ಲೆ 5ರ ಪ್ರಾಂತೀಯ ಅಧ್ಯಕ್ಷ ಕೆ.ಸೀತಾರಾಮ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಹರ್ಷವರ್ದನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕಿಶೋರ್ ಶೆಟ್ಟಿ ವಂದಿಸಿದರು.