ಬ್ರಹ್ಮಾವರ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ರಥಬೀದಿ ಬ್ರಹ್ಮಾವರ ದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಶನಿವಾರ ಧಾತ್ರಿಹವನ, ಮಹಾ ಪೂಜಾದಿ ವನ ಭೋಜನ ಸಮಾರಾಧನೆ ಮತ್ತು ದೀಪೋತ್ಸವ ಜರುಗಿತು.
ಭಾನುವಾರ ದೇವರ ಉತ್ಸವ ಮೂರ್ತಿ ರಥಬೀದಿಯಿಂದ ಮೆರವಣಿಗೆ ಮೂಲಕ ಬ್ರಹ್ಮಾವರ ಆಕಾಶವಾಣಿ ಬಳಿಯಿಂದ ಹಂದಾಡಿ ಮಾರ್ಗ ಮೂಲಕ ಸಾಗಿ ಬಾರಕೂರು ಸೀತಾನದಿಯಲ್ಲಿ ಅವಭೃತೋತ್ಸವ ಸಂಪ್ರೋಕ್ಷಣೆ ಜರುಗಿತು.
ಆಡಳಿತ ಮೋಕ್ತೇಸರರಾದ ನರೇಂದ್ರ ಪೈ, ಗೋಪಾಲಕೃಷ್ಣ ಪೈ, ಅರ್ಚಕರಾದ ಗೋಪಿನಾಥ್ ಭಟ್ , ವಸುದಾನಂದ ಭಟ್ ಮತ್ತು ಗೌಡ ಸಾರಸ್ವತ ಸಮಾಜದ ಅನೇಕರು ಭಾಗವಹಿಸಿದ್ದರು.
Advertisement. Scroll to continue reading.