ಕುಂದಾಪುರ : ಆಟೋ ರಿಕ್ಷಾ ನಿಲ್ದಾಣದೊಳಕ್ಕೆ ನುಗ್ಗಿದ ಟಿಪ್ಪರ್; ನಾಲ್ಕು ರಿಕ್ಷಾ ಜಖಂ
Published
1
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಮುಳ್ಳಿಕಟ್ಟೆಯಲ್ಲಿ ಆಟೋ ರಿಕ್ಷಾ ನಿಲ್ದಾಣದೊಳಗೆ ನಿಯಂತ್ರಣ ತಪ್ಪಿದ ಟಿಪ್ಪರ್ ನುಗ್ಗಿದ ಪರಿಣಾಮ ನಾಲ್ಕು ಆಟೋಗಳು ನಜ್ಜುಗುಜ್ಜಾಗಿರುವ ಘಟನೆ ನಡೆದಿದೆ.
ಹೆಮ್ಮಾಡಿ ಕಡೆಯಿಂದ ಬೈಂದೂರಿತ್ತ ಅತೀ ವೇಗದಿಂದ ಸಾಗುತ್ತಿದ್ದ ಟಿಪ್ಪರ್ ತ್ರಾಸಿ ಸಮೀಪದ ಮುಳ್ಳಿಕಟ್ಟೆ ಕ್ರಾಸ್ ಬಳಿ ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿದೆ. ಪರಿಣಾಮ ಹೆದ್ದಾರಿಯ ಸಮೀಪವಿದ್ದ ಆಟೋ ನಿಲ್ದಾಣಕ್ಕೆ ನುಗ್ಗಿದ್ದು 4 ಆಟೋಗಳು ಹಾನಿಯಾಗಿವೆ. ಅದೃಷ್ಟ ವಶಾತ್ ಆಟೋ ಚಾಲಕರು ಅಪಾಯದಿಂದ ಪಾರಾಗಿದ್ದಾರೆ.