ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಗುರುವಾರ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ರಂಗಪೂಜಾಧಿ ದೀಪೋತ್ಸವ, ರಥೋತ್ಸವ, ತುಲಾಭಾರ ಸೇವೆ ಜರುಗಿತು.
ನೂಥನವಾಗಿ ನಿರ್ಮಾಣಗೊಂಡ ವಡೇರಹೊಬಳಿ ವೆಂಕಟರಮಣ ಆಚಾರ್ಯ ರಂಗವೇದಿಕೆಯಲ್ಲಿ ಪರಮಪೂಜ್ಯ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ಜರುಗಿತು.
ಮುಖ್ಯ ಅತಿಥಿ ಬೈಂದೂರು ಮಾಜಿ ಶಾಸಕ ಗೋಪಾಲಪೂಜಾರಿ ಮಾತನಾಡಿ, ನೂತನವಾಗಿ ಸಾಂಪ್ರದಾಯಕ ಶಿಲ್ಪಕಲೆಯೊಂದಿಗೆ ರಚನೆಗೊಂಡು ಅಷ್ಠಬಂಧ ಬ್ರಹ್ಮಕಲಶೋತ್ಸವಗೊಂಡ ಬಳಿಕ ಬಾರಕೂರು ಕಾಳಿಕಾಂಬಾ ದೇವಸ್ಥಾನ ಮಹಾಕ್ಷೇತ್ರವಾಗಿದೆ. ಕರಾವಳಿಯ ಎಲ್ಲ ದೇವಾಲಯಕ್ಕೆ ಇದು ಮಾದರಿ ಎಂದರು.
ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರು ಅನುಗ್ರಹ ಭಾಷಣ ಮಾಡಿ, ಉತ್ತಮ ನಾಯಕತ್ವ ಮತ್ತು ಸಾಮೂಹಿಕ ಪ್ರಯತ್ನ ಇದ್ದರೆ, ಕೋವಿಡ್ ನಂತಹ ಕಠಿಣ ಸಮಯದಲ್ಲೂ ಅಸಾದ್ಯವಾದುದನ್ಬು ಸಾಧ್ಯ ಮಾಡ ಬಹುದು ಎನ್ನುವುದಕ್ಕೆ ಬಾರಕೂರು ಶ್ರೀ ಕಾಳಿಕಾಂಭಾ ದೇವಸ್ಥಾನದ ನವೀಕರಣ ಮತ್ತು ಬ್ರಹ್ಮಕಲಶೋತ್ಸವ ಸಾಕ್ಷಿ ಎಂದರು.
ವಿಶ್ವಕರ್ಮರ ಮಕ್ಕಳಿಗೆ ರಾಜಕೀಯ ಆಸಕ್ತಿಗಿಂತ ಶಿಕ್ಷಣಕ್ಕೆ ಮಹತ್ವ ನೀಡಿ, ಆಡಳಿತ ವ್ಯವಸ್ಥೆಗೆ ಪ್ರವೇಶ ಪಡೆದರೆ ನಿವೃತ್ತರಾಗುವ ತನಕ ಆಡಳಿತಾಧಿಕಾರಿಯಾಗಬಹುದು ಎಂದರು.
ದೇವಸ್ಥಾನದ ಆಡಳಿತ ಮೋಕ್ತೇಸರ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಆಡಳಿತ ಮಂಡಳಿಯ ಪ್ರವಿಣ್ ಆಚಾರ್ಯ ರಂಗನಕೆರೆ, ರವಿ ಆಚಾರ್ಯ, ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ , ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಗಣೇಶ್ಕಿಣಿ, ಸಂಭವಾಮಿ ಯುಗೇ ಯುಗೇ ಕನ್ನಡ ವಾಹಿನಿಯ ಸ್ಥಾಪಕ ರಾಮಮೂರ್ತಿ ಎಂ. ಆಚಾರ್ಯ, ಬ್ರಹ್ಮಾವರ ಗೋಪಾಲಕೃಷ್ಣ ಆಚಾರ್ಯ ದೆಹಲಿ ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಹಿರಿಯ ಗ್ರಾಮ ಮೋಕ್ತೇಸರರನ್ನು ಮತ್ತು ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಭಜನಾ ಕಾರ್ಯಕ್ರಮ ನಡೆಯಿತು.