ಪುತ್ತೂರು : ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯವರು ಕೊಡಮಾಡುವ ಪ್ರತಿಷ್ಠಿತ ‘ಕರ್ನಾಟಕ ಪ್ರತಿಭಾ ರತ್ನ’ ಗೌರವಕ್ಕೆ ಧನ್ವಿ ರೈ.ಕೋಟೆ ಆಯ್ಕೆಯಾಗಿದ್ದಾಳೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ.18 ರಂದು ತುಳುವ ವೇದಿಕೆ ಜೈನ ಮಠದ ಆವರಣ ಶ್ರವಣಬೆಳಗೊಳದಲ್ಲಿ ನಡೆಯಲಿದೆ.
ಧನ್ವಿ ರೈ.ಕೋಟೆ ಪಾಣಾಜೆ ಗ್ರಾಮದ ಕೋಟೆ ಬಾರಿಕೆಯ ಯಜಮಾನ ಕಿಟ್ಟಣ್ಣ ರೈ ಕೋಟೆ ಮತ್ತು ಸುಂದರಿ ರೈ ಕೋಟೆ ಅವರ ಮೊಮ್ಮಗಳಾಗಿದ್ದು, ರವಿಶಂಕರ ರೈ ಕೋಟೆ ಮತ್ತು ವಿಜಯಲಕ್ಷ್ಮಿ ರೈ ಅವರ ಸುಪುತ್ರಿ. ಅವರು
ವಿವೇಕ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆಯಲ್ಲಿ 6 ನೇ ತರಗತಿಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.