Connect with us

Hi, what are you looking for?

Diksoochi News

ಸಾಹಿತ್ಯ

ಲೇಖನ : ಸವಾಲುಗಳನ್ನು ಮೆಟ್ಟಿ ನಿಂತು ಸಾಧಿಸಿದ ಸಾಧಕಿ “ವಿಲ್ಮಾ ಸೆರಾವೋ”

3

ಲೇಖಕ : ಆರ್ ಜೆ ಎರಾಲ್


ಓದಿದ್ದು ಕನ್ನಡ ಮಾಧ್ಯಮದಲ್ಲಿ..ಆರಿಸಿಕೊಂಡಿದ್ದು ಕಲಾ ವಿಭಾಗವನ್ನು. ಆದರೆ, ವಿಧಿ ಇವರನ್ನು ಯಶಸ್ವಿ ಪತ್ರಕರ್ತೆಯನ್ನಾಗಿ ಬೆಳೆಸಿತು..ಕರ್ನಾಟಕ ಮಾತ್ರವಲ್ಲ, ವಿದೇಶಗಳಲ್ಲಿಯೂ ನಿರೂಪಣೆಯ ಅವಕಾಶವನ್ನು ಪಡೆದು ಇದೀಗ ಬಹುಬೇಡಿಕೆಯ ನಿರೂಪಕಿ ಆಗಿದ್ದಾರೆ ಪ್ರೊ.ವಿಲ್ಮಾ ಸೆರಾವೋ.

ನಿರೂಪಕಿ..ಶಿಕ್ಷಕಿ…

Advertisement. Scroll to continue reading.

ಕಣ್ಣ ತುಂಬಾ ಕನಸುಗಳ ತುಂಬಿಕೊಂಡು ಜೀವನದಲ್ಲಿ ಸಾಧಿಸಬೇಕು ಎಂಬ ಮಹಾದಾಸೆಯನ್ನು ಹೊತ್ತುಕೊಂಡು ಚಿಕ್ಕಮಗಳೂರಿನ ಮೂಡಿಗೆರೆಯಿಂದ ಮಂಗಳೂರಿನ ಶಕ್ತಿನಗರದತ್ತ ಪಯಣಿಸಿದರು. ಇದೀಗ ದುಬೈನ ಮಣಿಪಾಲ್ ಕಾಲೇಜ್ ನಲ್ಲಿ ಪತ್ರಿಕೋದ್ಯಮ ವಿಭಾಗದ ಶಿಕ್ಷಕಿಯಾಗಿ ಉದ್ಯೋಗ ಮಾಡುತ್ತಿದ್ದಾರೆ ವಿಲ್ಮಾ…
ಪತ್ರಿಕೆ, ವೆಬ್ಸೈಟ್, ಕೋ-ಅಪರೇಟ್ ಕಂಪೆನಿ, ಟಿವಿ, ನಿರೂಪಣೆ, ಇವೆಂಟ್ ಮ್ಯಾನೇಜ್ಮೆಂಟ್… ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಯಶಸ್ವೀ ಹೆಜ್ಜೆ ಇಟ್ಟಿದ್ದಾರೆ ವಿಲ್ಮಾ…

ಪ್ರವಾಸ ಇಷ್ಟ; ನಿರೂಪಣೆ ಸ್ಪಷ್ಟ :

ವಿಲ್ಮಾ ಪ್ರತಿಭಾವಂತೆ. ಅದಕ್ಕೆ ಸಾಕ್ಷಿ ಅವರ ಮಾಧ್ಯಮ ಕ್ಷೇತ್ರದಲ್ಲಿ ಆಕೆ ನೀಡಿರುವ ಕೊಡುಗೆ. ಬ್ರೇಕಿಂಗ್ ನ್ಯೂಸ್ ಸ್ಟೋರಿಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಅನೇಕ ತಾರೆಗಳ ಸಂದರ್ಶನ ಮಾಡಿದ್ದಾರೆ. ಸ್ಥಳೀಯ ವಾಹಿನಿಗಳಲ್ಲಿಯೂ ಅವರು ಅನೇಕ ಕಾರ್ಯಕ್ರಮ ನೀಡಿದ್ದಾರೆ. ಇವರ ಸಂದರ್ಶನ ಮಂಗಳೂರಿನ ಹಾಗೂ ದುಬೈನ ರೇಡಿಯೋಗಳಲ್ಲಿಯೂ ಪ್ರಸಾರವಾಗಿದೆ.
ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಅನುಭವ ಹೊಂದಿರುವ ವಿಲ್ಮಾ ಸುಮಾರು 500ಕ್ಕೂ ಹೆಚ್ಚು ಯಶಸ್ವೀ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ನಡೆದ ಚಲನಚಿತ್ರೋತ್ಸವದ ಕಾರ್ಯಕ್ರಮ ನಿರೂಪಣೆ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿ, ಭೇಷ್ ಎಂದೆನಿಸಿಕೊಂಡಿದ್ದಾರೆ ವಿಲ್ಮಾ.
ಅಂದಹಾಗೆ ವಿಲ್ಮಾ ಅವರಿಗೆ ಪ್ರವಾಸ ಅಂದ್ರೆ ಇಷ್ಟ. ಹೋಟೆಲ್ ಗಳಿಗೆ ಭೇಟಿ ನೀಡಿ ದೇಶ – ವಿದೇಶದ ತಿಂಡಿಗಳನ್ನು ಸವಿದು, ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೊಂದಿದ್ದಾರೆ ವಿಲ್ಮಾ. ಜಗತ್ತಿನ ಪ್ರಖ್ಯಾತ ಹೋಟೆಲ್ ಸಮೂಹ ಸಂಸ್ಥೆ ‘ಹಿಲ್ಟನ್ ಗ್ರೂಪ್’ನ ಸದಸ್ಯತ್ವ ಹೊಂದಿದ್ದಾರೆ. ದೇಶ ಹಾಗೂ ವಿದೇಶದ ತಿಂಡಿ ತಿನಿಸುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವ ವಿಲ್ಮಾ, ಈಗಾಗಲೇ 3 ರಾಷ್ಟ್ರಗಳಿಗೆ ಭೇಟಿ ಕೊಟ್ಟು ಅಲ್ಲಿನ ತಿಂಡಿ ತಿನಿಸುಗಳನ್ನು ಸವಿದಿದ್ದಾರೆ.


ತಮ್ಮ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದೆ, ತಮ್ಮ ಕೆಲಸದ ಮೂಲಕವೇ ಜನಪ್ರಿಯ ಆಗಿರುವ ವಿಲ್ಮಾ ಅವರಿಗೆ ಚಿನ್ನ ಅಂದರೆ ಅಚ್ಚುಮೆಚ್ಚು. ಅವರ ಬಾಳು ಕೂಡಾ ‘ಚಿನ್ನ’ದಂತೆ ಬೆಳಗುತ್ತಿರಲಿ ಎಂದು ಆಶಿಸೋಣ…

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅರೆ ಹೌದಾ!

1 ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯ ವೇಷವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ....

ರಾಷ್ಟ್ರೀಯ

0 ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ ‘ಶುಗರ್’ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ...

ರಾಜ್ಯ

0 ಮಂಡ್ಯ: ಐಸ್ ಕ್ರೀಮ್ ಸೇವನೆ ಮಾಡಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್...

ರಾಷ್ಟ್ರೀಯ

0 ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿರಿಯ ವಕೀಲ...

ರಾಜ್ಯ

1 ಹುಬ್ಬಳ್ಳಿ : ಕಾರ್ಪೋರೇಟರ್ ನಿರಂಜನ್ ಹಿರೇಮಠ ಎಂಬವರ ಮಗಳನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದಿದೆ.ನೇಹಾ ಹಿರೇಮಠ ಹತ್ಯೆಯಾದ ವಿದ್ಯಾರ್ಥಿನಿ. ಕಾಲೇಜ್ ಕ್ಯಾಂಪಸ್ ನಲ್ಲಿರುವ ಕ್ಯಾಂಟೀನ್ ನಲ್ಲಿ...

error: Content is protected !!