Connect with us

Hi, what are you looking for?

Diksoochi News

ಕರಾವಳಿ

ಶ್ರೀ ಮಠ ಬಾಳೆಕುದ್ರುಗೆ ಕೊಲ್ಲಾಪುರ ಸಿದ್ಧಗಿರಿ ಮಹಾ ಸಂಸ್ಥಾನ ಕಾಡು ಸಿದ್ಧೇಶ್ವರ ಸ್ವಾಮೀಜಿ ಭೇಟಿ;
ದೇಶವ್ಯಾಪಿ ಮತಾಂತರ ಕಾಯಿದೆ ಜಾರಿಯಾಗಬೇಕು ಹೇಳಿಕೆ

1

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಕೊಲ್ಲಾಪುರ ಸಿದ್ಧಗಿರಿ ಮಹಾಸಂಸ್ಥಾನ ಕನ್ನೆರಿ ಶ್ರೀ ಶ್ರೀ ಶ್ರೀ ಕಾಡು ಸಿದ್ಧೇಶ್ವರ ಸ್ವಾಮೀಜಿ ಮಂಗಳವಾರ ಶ್ರೀ ಮಠ ಬಾಳೆಕುದ್ರುಗೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಭೇಟಿ ಮಾಡಿ ಶ್ರೀ ಮಠದಲ್ಲಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಬಗೆಗಿನ ಕುರಿತು ಚರ್ಚಿಸಿದರು.

Advertisement. Scroll to continue reading.

ಇಲ್ಲಿನ ಕೃಷಿ ಚಟುವಟಿಕೆ ಕ್ಷೇತ್ರದಲ್ಲಿ ಶ್ರೀ ಮಠ ಮುಂಚೂಣಿಯಲ್ಲಿದೆ ಅಲ್ಲದೆ ಯುವ ಸಮುದಾಯಕ್ಕೆ ಆಸಕ್ತಿಮೂಡಿಸುವಲ್ಲಿ ಯಶಸ್ವಿಯಾಗುತ್ತಿವೆ. ಧಾರ್ಮಿಕ ವಿಚಾರಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರಲ್ಲದೆ ಹಳ್ಳಿಗಳು ಅಭಿವೃದ್ಧಿ ಹೊಂದಬೇಕು ಅಲ್ಲಿನ ಕೃಷಿ ಕಾಯಕಕ್ಕೆ ಪ್ರೋತ್ಸಾಹ ದೊರೆಯಬೇಕು. ಹಳ್ಳಿಯಂದ ಗುಳೆ ಹೊಗುವಂತಹವುದನ್ನು ತಪ್ಪಿಸಬೇಕು. ಆ ಮೂಲಕ ದೇಶದ ನಾಡಿನ ಅಭಿವೃದ್ಧಿ ಸಾಧ್ಯ ಎಂದರು.


ರಾಜ್ಯದಲ್ಲಿ ಮತಾಂತರ ನಿಷೇಧದ ಕುರಿತಂತೆ ಬಿಸಿ ಚೆರ್ಚಗಳಾಗುತ್ತಿವೆ. ಅದರ ಸುದ್ಧಿಗಳನ್ನು ಕೇಳಿ ತಿಳಿದಿದ್ದೇನೆ. ನಿಜವಾಗಿಯೂ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವುದು ಅತ್ಯಗತ್ಯ. ಏಕೆಂದರೆ ದೇಶದ ವಿವಿಧ ರಾಜ್ಯಗಳಲ್ಲಿ ಮತಾಂತರ ವ್ಯಾಪಕವಾಗಿ ಹರಡಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ವಿವಿಧ ಬಗೆಯ ಆಸೆ ಆಮಿಷಗಳನ್ನು ಒಡ್ಡಿ , ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡಿ ಮತಾಂತರ ಮಾಡುವುದರ ವಿರುದ್ಧ ಮಠಮಂದಿರಗಳು ಸಿಡಿದೆದ್ದು ನಿಲ್ಲಲಿದೆ. ಈ ಪ್ರಕ್ರೀಯೆ ಮೂಲಕ ಸರಕಾರದ ಇಬ್ಬಗೆ ಸವವತ್ತು ಪಡೆಯುವುದು ಸರಿಯಲ್ಲ ಒತ್ತಾಯಪೂರಕ ಮತಾಂತರ ಒಳ್ಳೆಯ ಬೆಳವಣಿಗೆಯಲ್ಲ. ಇನ್ನೊಂದೆಡೆ ದೇಶದಲ್ಲಿ ಲವ್ ಜಿಹಾದ್ ಅಟ್ಟಹಾಸ. ಇದು ಹೀಗೆ ಮುಂದುವರೆದರೆ ಹಿಂದೂ ಸಮಾಜಕ್ಕೆ ಸಂಕಷ್ಟ ಎದುರಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ, ಈ ವಿಚಾರದಲ್ಲಿ ರಾಜಕೀಯ ಸಲ್ಲ. ಬದಲಾಗಿ ಕಾಯಿದೆ ಜಾರಿಗೊಳ್ಳುವುದಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಬಾಳೆಕುದ್ರು ಶ್ರೀಮಠದ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!