ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬಿಲ್ಲಾಡಿ ದೊಡ್ಮನೆ ಮಹಾಗಣಪತಿ ಕೇಚರಾಹುತ ಸಾಂಪ್ರದಾಯಕ ಕಂಬಳ ಗುರುವಾರ ನಡೆಯಿತು.
ಈ ಸಂದರ್ಭ ಡೊಡ್ಮನೆ ಕುಟುಂಬಿಕರು ಕಂಬಳಕ್ಕೆ ಬರುವ ಕೋಣಗಳನ್ನು ಸಾಂಪ್ರದಾಯಕವಾಗಿ ಬರಮಾಡಿಕೊಂಡರು.
2 ವಿಭಾಗದಲ್ಲಿ ಕೋಣಗಳ ಹಲಗೆ ಓಟ ಮತ್ತು ಹಗ್ಗದ ಓಟ ನಡೆಯಿತು.
ಡಿಜಿಟಲ್ ಮೂಲಕ ಓಟದ ಸಮಯವನ್ನು ಮಾಡಲಾಗಿತ್ತು.
ವಿಜೇತ ಕೋಣಗಳಿಗೆ ಮತ್ತು ಓಟಗಾರರಿಗೆ ನಗದು ಬಹುಮಾನ ಮತ್ತು ಶಾಶ್ವತ ಫಲಕವನ್ನು ನೀಡಲಾಯಿತು.
ಜಿಲ್ಲೆಯ ನಾನಾ ಭಾಗದ 50 ಕೋಣಗಳು ಕಂಬಳದಲ್ಲಿ ಭಾಗವಹಿಸಿತ್ತು. ಪರಿಸರದ ಸಹಸ್ರಾರು ಮಂದಿ ಸಾಂಪ್ರದಾಯಕ ಕಂಬಳವನ್ನು ಕಣ್ತುಂಬಿಕೊಂಡರು.
ದೊಡ್ಮನೆ ಕುಟುಂಬದ ಪ್ರಥ್ವಿರಾಜ್ ಶೆಟ್ಟಿ ನೇತೃತ್ವ ವಹಿಸಿದ್ದರು.
Advertisement. Scroll to continue reading.