ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಭಾರತೀಯ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ರಾಜ್ಯ ಸಮಿತಿ ಅಂಬೇಡ್ಕರ್ ವಾದದ ನಿರ್ಣಯದಂತೆ ಡಿಸೆಂಬರ್ 28ರಂದು ಕೈಗೊಂಡಿರುವ “ವಿಧಾನಸೌಧ ಚಲೋ” ಕಾರ್ಯಕ್ರಮದಲ್ಲಿ, ವಿವಿಧ ಬೇಡಿಕೆಗಳಾದ ಭೂ ಹಂಚಿಕೆ,ದಲಿತರ ಸಬಲೀಕರಣ,ವಿದ್ಯಾರ್ಥಿ ವೇತನ ಹೆಚ್ಚಳ,ದಲಿತ ಹೆಣ್ಣು ಮಕ್ಕಳ ರಕ್ಷಣೆ,ಬ್ಯಾಕ್ ಲಾಗ್ ಭರ್ತಿ,ಬಡ್ತಿ ಮೀಸಲಾತಿ,ಪ.ಜಾ/ಪ.ಪಂ.ವರ್ಗದ ಉಪಯೋಜನೆಗಳ ಹಣ ಅಸಮರ್ಪಕ ಬಳಕೆ ಮೂಲಕ ಇತರ ವರ್ಗದ ಅಭಿವೃಧ್ಧಿಗೆ ನೀಡುತ್ತಿರುವ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು “ವಿಧಾನಸೌಧ ಚಲೋ” ಕಾರ್ಯಕ್ರಮಕ್ಕೆ ಕುಂದಾಪುರ ತಾಲೂಕಿನಿಂದ ಐನೂರು ಮಂದಿ ಪಾಲ್ಗೊಳ್ಳಲಿದ್ದಾರೆಂದು ತಾಲೂಕು ಶಾಖೆಯ ಪ್ರಧಾನ ಸಂಚಾಲಕರಾದ ಶ್ರೀಯುತ ನಾಗರಾಜ್ ಎಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement. Scroll to continue reading.