ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬ್ರಹ್ಮಾವರ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಅಧ್ಯಯನ ಪ್ರವಾಸ ಕಾರ್ಯಕ್ರಮದಲ್ಲಿ ಹೇರೂರು ಮಹಾಲಿಂಗೇಶ್ವರ ಜ್ಞಾನ ವಿಕಾಸ ಕೇಂದ್ರ ಮತ್ತು ನೀಲಾವರ
ಶ್ರೀ ಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಸರ್ಕಾರಿ ಇಲಾಖೆಗಳಾದ ಬ್ರಹ್ಮಾವರ ಪೊಲೀಸ್ ಠಾಣೆ, ಉಡುಪಿ ಅಗ್ನಿಶಾಮಕ ಠಾಣೆ, ಉಡುಪಿ “ಸಖಿ” ಒನ್ ಸ್ಟಾಪ್ ಸೆಂಟರ್ ಭೇಟಿ ಮಾಡಿಸಲಾಯಿತು.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಉಪ ನಿರೀಕ್ಷಕಿ ಸುನೀತಾ ಪೊಲೀಸ್ ಠಾಣಾ ಕಾರ್ಯಕಲಾಪಗಳ ಬಗ್ಗೆ, ಅಪರಾಧ ತಡೆ ಕಾಯ್ದೆಗಳ ಬಗ್ಗೆ ತಿಳಿಸಿದರು.
ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಗಳಾದ ಶ್ರೀಯುತ ಸತೀಶ್ ರವರು ಅಗ್ನಿಶಾಮಕ ಠಾಣೆಯ ಕಾರ್ಯಕಲಾಪಗಳು, ಅವಘಡದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿಯನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಬರುವ “ಸಖಿ ” ಒನ್ ಸ್ಟಾಪ್ ಸೆಂಟರ್ ನ ಆಪ್ತಸಮಾಲೋಚಕಿ ನೀತಾ ಕೆ. ಎಸ್ ಇಲಾಖೆಯ ಕಾರ್ಯಕಲಾಪಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.