Connect with us

Hi, what are you looking for?

Diksoochi News

ಕರಾವಳಿ

ಕೋಟ- ದೇವಾಲಯಗಳಲ್ಲಿ ಕಲಾಸೇವೆ ನಿರಂತರ
ನಡೆಯಲಿ: ನರಸಿಂಹ ಸೋಮಯಾಜಿ

1

ವರದಿ : ದಿನೇಶ್ ರಾಯಪ್ಪನಮಠ

ಕೋಟ: ದೇವಾಲಯಗಳಲ್ಲಿ ಧಾರ್ಮಿಕ ಸೇವೆಗಳ ಜೊತೆಯಲ್ಲಿ ಕಲಾಸೇವೆಯನ್ನು ನಡೆಸುವುದು ಬಹಳ ಹಿಂದಿನಿಂದಲೂ ನಡೆದುಕಂಡು ಬಂದ ಪದ್ಧತಿ. ರಾಜಾಶ್ರಯದ ನಂತರ ದೇವಾಲಯಗಳೇ ಕಲೆಗಳಿಗೆ ಆಶ್ರಯವನ್ನು ನೀಡುತ್ತಾ ಬಂದಿವೆ. ಉತ್ಸವಾದಿಗಳ ಸಂದರ್ಭದಲ್ಲಿ ಕಲಾ ಸೇವೆಯನ್ನು ಸಂಘಟಿಸುವುದು ಶ್ಲಾಘನೀಯ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹ ಸೋಮಯಾಜಿ ಹೇಳಿದರು. ಅವರು ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನ ಹಾಗೂ ಯಕ್ಷದೇಗುಲ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ವಾರ್ಷಿಕ ರಥೋತ್ಸವದ ಅವಭೃತಸ್ನಾನದ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮ ಯಕ್ಷ-ಗಾನ-ಲಹರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್, ಯಕ್ಷದೇಗುಲ ಬೆಂಗಳೂರು ಇದರ ಸಂಚಾಲಕರಾದ ಸುದರ್ಶನ ಉರಾಳ, ಹಂದೆ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟರಮಣ ಸೋಮಯಾಜಿ , ಆಡಳಿತ ಮಂಡಳಿ ಅಧ್ಯಕ್ಷ ಅಮರ ಹಂದೆ, ಸಾಂಸ್ಕೃತಕ ವೇದಿಕೆಯ ಸದಸ್ಯ ರಾಘವೇಂದ್ರ ತುಂಗ, ಕಲಾಸಂಘಟಕ ವೆಂಕಟೇಶ ವೈದ್ಯ, ಬ್ಯಾಂಕ್ ಉದ್ಯೋಗಿ ರಾಘವೇಂದ್ರ ತುಂಗ, ಕಟ್ಟೆ ಬಳಗದ ಸುರೇಶ್ ಪೂಜಾರಿ ಉಪಸ್ಥಿತರಿದ್ದರು. ಬಳಿಕ ಸುಜಯೀಂದ್ರ ಹಂದೆ ನಿರೂಪಣೆಯಲ್ಲಿ, ರಾಘವೇಂದ್ರ ಮಯ್ಯ ಹಾಲಾಡಿ, ಸುರೇಶ್ ಶೆಟ್ಟಿ ಶಂಕರನಾರಾಯಣ, ಲಂಬೋದರ
ಹೆಗಡೆ ನಿಟ್ಟೂರು, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ ಕೋಟ ಇವರನ್ನು ಒಳಗೊಂಡು ಯಕ್ಷ-ಗಾನ-ಲಹರಿ ಕಾರ್ಯಕ್ರಮ ನೆರವೇರಿತು.
ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನ ಹಾಗೂ ಯಕ್ಷದೇಗುಲ ಬೆಂಗಳೂರು ಇವರ ಸಂಯುಕ್ತ
ಆಶ್ರಯದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ವಾರ್ಷಿಕ ರಥೋತ್ಸವದ ಅವಭೃತಸ್ನಾನದ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮ ಯಕ್ಷ-ಗಾನ-ಲಹರಿ
ಕಾರ್ಯಕ್ರಮವನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹ
ಸೋಮಯಾಜಿ ಉದ್ಘಾಟಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಅಮರ ಹಂದೆ, ಸಾಂಸ್ಕೃತಕ ವೇದಿಕೆಯ ಸದಸ್ಯ ರಾಘವೇಂದ್ರ ತುಂಗ, ಕಲಾಸಂಘಟಕ ವೆಂಕಟೇಶ ವೈದ್ಯ, ಬ್ಯಾಂಕ್ ಉದ್ಯೋಗಿ ರಾಘವೇಂದ್ರ ತುಂಗ, ಕಟ್ಟೆ ಬಳಗದ ಸುರೇಶ್ ಪೂಜಾರಿ ಉಪಸ್ಥಿತರಿದ್ದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಮಂಗಳೂರು: ನಗರದ ಬಾವುಟಗುಡ್ಡೆ ಮೆಡಿಕಲ್ ಕಾಲೇಜಿನ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮೊಬೈಲ್‌ನಲ್ಲಿ 6 ನಿಮಿಷದ ವಿಡಿಯೋ ಪತ್ತೆಯಾಗಿದೆ. ಪ್ರಕರಣಕ್ಕೆ...

ಸಿನಿಮಾ

2 ಬೆಂಗಳೂರು: ತಮ್ಮ 40ರ ಆಸುಪಾಸಿನಲ್ಲಿದ್ದರೂ, ಎಳೆ ಹುಡುಗಿಯರಿಗೂ ಕಡಿಮೆ ಇಲ್ಲದಂತೆ ಮೈಮಾಟ ತೋರಿಸುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿದ್ದ ಕಿರುತೆರೆ ನಟಿ ಜ್ಯೋತಿ ರೈ ಈಗ ಕೆಟ್ಟ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ...

ರಾಷ್ಟ್ರೀಯ

0 ಶ್ರೀನಗರ: ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಎಲ್‌ಇಟಿ ಕಮಾಂಡರ್ ಸೇರಿ ಮೂವರ ಹತ್ಯೆಯಾಗಿದೆ. ದಕ್ಷಿಣ...

ಕ್ರೀಡೆ

0 ಹೀನಾಯ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಕೋಪಗೊಂಡಿದ್ದಾರೆ. ತಂಡ ನೀಡಿದ ಪ್ರದರ್ಶನದಿಂದ ಅಸಮಾಧಾನಗೊಂಡಂತೆ ಕಂಡುಬಂತು. ಸಂಜೀವ್ ಅವರು ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಕೋಪದಲ್ಲಿ...

ರಾಷ್ಟ್ರೀಯ

1 ಮುಂಬೈ: ಬೀದಿ ಬದಿಯಲ್ಲಿ ಚಿಕನ್ ಬೀದಿ ಬದಿಯಲ್ಲಿ ಚಿಕನ್ ಶವರ್ಮಾ ತಿಂದ ಯುವಕನೊಬ್ಬ ಮೃತಪಟ್ಟಿದ್ದು, ಐವರು ಅಸ್ವಸ್ಥಗೊಂಡ ಘಟನೆ ಮಹಾರಾಷ್ಟ್ರದ ಮನ್‌ಖುರ್ದ್‌ನ ನಗರದಲ್ಲಿ ನಡೆದಿದೆ ಪ್ರಥಮೇಶ್ ಭೋಕ್ಷೆ (19) ಮೃತ ಯುವಕ....

error: Content is protected !!