ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕೇಂದ್ರ ಸರ್ಕಾರದ ಜನ ವಿರೋಧಿ ಬಜೆಟ್ ಎಂದು ಶುಕ್ರವಾರ ಕುಂದಾಪುರ ಶಾಸ್ತ್ರಿ ವ್ರತ್ತದಲ್ಲಿ ಸಿಐಟಿಯು ಸಂಚಲನ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಿಐಟಿಯು ಸಂಚಾಲಕ ಎಚ್ ನರಸಿಂಹ ಮಾತನಾಡಿ, ಅಚ್ಛೆ ದಿನಗಳ ಕಾಲದ ನಂತರ ಅಮ್ರತ ಕಾಲದ ಬಜೆಟ್ ಆಗಿದ್ದು ಏಷ್ಯಾದ ಮೂರನೇ ದೊಡ್ಡ ಬಜೆಟ್ ಎಂದು ಬಣ್ಣಿಸಿ ಜನ ಸಾಮಾನ್ಯರಿಗೆ ಕೊಡಮಾಡುವ ಎಲ್ಲಾ ಹಣಕಾಸುಗಳನ್ನು ಕಡಿತ ಮಾಡಲಾಗಿದೆ.ಬಂಡವಾಳ ಹೂಡಿಕೆಯ ನೆಪದಲ್ಲಿ ದೇಶದ ಜನರ ಆಸ್ತಿಗಳನ್ನು ಮಾರಾಟ ಮಾಡಿ ಕಾರ್ಪೋರೇಟ್ ಲೂಟಿಗೆ ಬಜೆಟ್ ಮಂಡಿಸಿರುವುದ
ು ಸ್ಪಷ್ಟವಾಗಿದೆ.
ರಸಗೊಬ್ಬರ, ಆಹಾರ, ಉದ್ಯೋಗ ಖಾತ್ರಿ, ಕೃಷಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ಹಣ ಕಡಿತ ಮಾಡಿದ ಜನ ದ್ರೋಹಿ ಬಜೆಟ್ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಲಾಕ್ ಡೌನ್ ನಿಂದ ಶೇ.84 ರಷ್ಟು ಜನರು ಸಂಕಷ್ಟಕ್ಕೊಳಗಾದವರಿಗೆ ಬಜೆಟ್ ಯಾವುದೇ ಸಹಾಯ ಮಾಡಿಲ್ಲ. ಈ ಅವಧಿಯಲ್ಲಿ ದೇಶದ ಅತೀ ದೊಡ್ಡ ಶ್ರೀಮಂತರ ಆದಾಯ 13 ಲಕ್ಷ ಕೋಟಿ ಹೆಚ್ಚಳ ಗೊಂಡವರ ಪರವಾಗಿ ಮಂಡಿಸಿದ ಬಜೆಟ್ ಮಂಡಿಸಿರುವುದು ದುರಾದೃಷ್ಟಕರ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದವರಿಗೆ, ಗ್ರಾಮೀಣ ಅಭಿವೃದ್ಧಿಗೆ, ಕೃಷಿಗೆ ಸಂಬಂಧಿಸಿದಂತೆ ಇರುವ ಹಣ ಕಡಿತ ಮಾಡಿದೆ. ಜನ ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ಮುಂದೆ 50 ವರ್ಷದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು ಈ ಬಗ್ಗೆ ಜನರು ಚರ್ಚಿಸಿದಂತೆ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಮಹಾಬಲ ವಡೇರಹೋಬಳಿ,ಬಲ್ಕೀಸ್, ಪ್ರಕಾಶ್ ಕೋಣಿ,ಲಕ್ಷ್ಮಣ ಮುಂತಾದವರು ನೇತೃತ್ವವ ವಹಿಸಿದ್ದರು.
ಚಂದ್ರಶೇಖರ ವಿ. ಸ್ವಾಗತಿಸಿದರು. ರಾಜುದೇವಾಡಿಗ ವಂದಿಸಿದರು