ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ 766 ಸಿ ಬೈಂದೂರು- ರಾಣೆ ಬೆನ್ನೂರು ರಸ್ತೆಯಲ್ಲಿ 2021-22 ನೇ ಸಾಲಿಗೆ ಮಂಜೂರಾದ ಕಾಮಗಾರಿಗಳ ಶಂಕುಸ್ಥಾಪನೆ ನಡೆಯಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ರಾಷ್ಠ್ರೀಯ ಹೆದ್ದಾರಿಯಾದ 766 ಸಿ ಬೈಂದೂರು ರಾಣೆ ಬೆನ್ನೂರು ರಸ್ತೆಯ ಈ ಕೆಳಕಂಡ ಕಾಮಗಾರಿಗಳಿಗೆ 2021-22 ನೇ ಸಾಲಿನಲ್ಲಿ ಅನುಮೋದನೆ ನೀಡಿದ್ದು, ರೂ 218.93 ಕೋಟಿ ವೆಚ್ಚದ ಕಾಮಗಾರಿ
ಗೆ ಕೇಂದ್ರ ಭೂಸಾರಿಗೆ ಸಚಿವ
ನಿತಿನ್ ಜೈರಾಂ ಗಡ್ಕರಿ ಶಂಕುಸ್ಥಾಪನೆ ಮಾಡಿದರು
.
1) ರಾ.ಹೆ 766 ಸಿ ಬೈಂದೂರು ರಾಣೆಬೆನ್ನೂರು ರಸ್ತೆಯ ಕಿ.ಮಿ 24.400 ರಿಂದ 27.270 (ಕೊಲ್ಲೂರು ಪಟ್ಟಣ), ಕಿ.ಮೀ 40.500 ರಿಂದ 41.900(ನಾಗೋಡಿ) ಕಿ.ಮೀ 84.300 ರಿಂದ 88.200(ಜಯನಗರದಿಂದ ಹೊಸನಗರದವರೆಗೆ) ಕಿ.ಮೀ 105.250 ರಿಂದ 112.710 (ಬಟ್ಟೆ ಮಲ್ಲಪ್ಪ ದಿಂದ ಯಡೇಹಳ್ಳಿಯವರೆಗೆ) ಕಿ.ಮೀ 161.550ರಿಂದ 166.350 (ಮಾಸೂರು), ಕಿ.ಮೀ 174.120ರಿಂದ 176.120 (ರಟ್ಟೇ ಹಳ್ಳಿ) ಕಿ.ಮೀ 186.550 ರಿಂದ 191.900( ಹಲಗೇರಿ ಭಾಗದಲ್ಲಿ) ದ್ವಿಪಥ ರಸ್ತೆಯ ನಿರ್ಮಾಣ
(ರಾ.ಹೆ. ಮಾನದಂಡಗಳಿಗನುಗುಣವಾಗಿ ಕೊಲ್ಲೂರಿನಿಂದ ದಳಿವರೆಗೆ ಒಟ್ಟು 2.87 ಕಿ.ಮೀ ಉದ್ದದ 10 ಮೀಟರ್ ಅಗಲದ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ).
2) ರಾ.ಹೆ 766 ಸಿ ಬೈಂದೂರು ರಾಣೆಬೆನ್ನೂರು ರಸ್ತೆಯ ಕಿ.ಮಿ 0.00 ಯಿಂದ 40.40 (ಬೈಂದೂರಿನಿಂದ ನಾಗೋಡಿ ವರೆಗೆ, ಕೋಲ್ಲೂರು ಪಟ್ಟಣದ ಬೈಪಾಸ್ ರಸ್ತೆ ಸೇರಿದಂತೆ) ದ್ವಿಪಥ ರಸ್ತೆಯ ನಿರ್ಮಾಣ
ಕೇಂದ್ರ ಭೂಸಾರಿಗೆ ಮಂತ್ರಾಲಯವು ಅಂದಾಜು ರೂ 400 ಕೋಟಿಗಳ ಈ ಮೇಲಿನ ಕಾಮಗಾರಿಗೆ ಡಿ.ಪಿ.ಆರ್. ತಯಾರಿಸಲು 1.35 ಕೋಟಿ ಅನುದಾನ ನೀಡಿದ್ದು, ರಾ.ಹೆ. ಮಾನದಂಡಗಳಿಗನುಗುಣವಾಗಿ ದ್ವಿಪಥ ರಸ್ತೆ ನಿರ್ಮಾಣದ ಡಿ.ಪಿ.ಆರ್.(ಯೋಜನಾ ವರದಿ) ತಯಾರಿಸಲಾಗುತ್ತಿದೆ ಎಂದು ಬಿ.ವೈ.ರಾಘವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.