ಮಣಿಪಾಲ: ಮನೆ ವಾಸ್ತವ್ಯದ ವಿಚಾರವಾಗಿ ತಮ್ಮ ಅಣ್ಣನನ್ನು ಕೊಂದಿರುವ ಘಟನೆ ಬಡಗುಬೆಟ್ಟು ಗ್ರಾಮದ ಕಂಬಳಕಟ್ಟದಲ್ಲಿ ನಡೆದಿದೆ.
ಬಾಲಕೃಷ್ಣ ಕೊಲೆಗೀಡಾದ ಅಣ್ಣ. ದಯಾನಂದ ಹತ್ಯೆಗೈದ ತಮ್ಮ.
ಮಾರ್ಚ್ 16 ರಂದು ಇವರಿಬ್ಬರ ನಡುವೆ ಮನೆಯ ವಾಸ್ತವ್ಯದ ವಿಚಾರದಲ್ಲಿ ಗಲಾಟೆ ಯಾಗಿದ್ದು ಇದೇ ದ್ವೇಷದಿಂದ ದಯಾನಂದನು ಮನೆಯಲ್ಲಿದ್ದ ಕತ್ತಿಯಿಂದ ಬಾಲಕೃಷ್ಣನ ತಲೆಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
Advertisement. Scroll to continue reading.
ತಲೆಗೆ ಬಲವಾಗಿ ಏಟು ಬಿದ್ದು, ಅಧಿಕ ರಕ್ತ ಸ್ರಾವವಾಗಿ ಬಾಲಕೃಷ್ಣನು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.