ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀದುರ್ಗಾದೇವಿ ಮಹಾಕಾಳಿ ಅಮ್ಮನವರ ದೇವಸ್ಥಾನ ಕೋಡಿಬೆಂಗ್ರೆ ಯಲ್ಲಿ 15 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಎಪ್ರಿಲ್ 29 ರಿಂದ ಮೇ 1 ರ ತನಕ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶುಕ್ರವಾರ ವೇದ ಮೂರ್ತಿ ವಾಗೀಶ ಶಾಸ್ತ್ರೀ ಪಾವಂಜೆ ಇವರ ನೇತೃತ್ವದಲ್ಲಿ ಚಂಡಿಕಾಯಾಗ ಜರುಗಿತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ರವರಿಂದ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ಜರುಗಿತು.
ಇದೇ ಸಂದರ್ಭದಲ್ಲಿ ಉಡುಪಿಯ ವಿದುಷಿ ಪವನ ಆಚಾರ್ಯ ಮತ್ತು ಬಳಗದವರಿಂದ ದೇವರ ಪ್ರಿತ್ಯರ್ಥ ಇಲ್ಲಿನ ಸೀತಾ ಸ್ವರ್ಣ ಮತ್ತು ಮಡಿಸಾಲು ನದಿಯ ಸಂಗಮ ಸ್ಥಳವಾದ ಕೋಡಿ ನದಿ ತೀರದಲ್ಲಿ ದೋಣಿಯಲ್ಲಿ ವೀಣಾ ವಾದನ ಬಳಿಕ ವೇದಿಕೆಯಲ್ಲಿ ನಡೆಯಿತು.
ಚಂದಿಕಾಯಾಗಕ್ಕೆ ನೂರಾರು ಜನರು ಭಾಗವಹಿಸಿ ದೇವರ ಪ್ರಸಾದ ಪಡೆದರು ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ಆಡಳಿತ ಮಂಡಳಿಯ ಚಂದ್ರ ಶೇಖರ ಪಠೇಲ್ , ದೇವದಾಸ ನಾಯ್ಕ್ , ಸಂತೋಷ ನಾಯ್ಕ್ , ಗೀರೀಶ್ ಖಾರ್ವಿ , ದಿನೇಶ್ ನಾಯ್ಕ್ , ರಂಜಿತ್ ಖಾರ್ವಿ ಸೇರಿದಂತೆ ಅನೇಕರು ನೇತೃತ್ವ ವಹಿಸಿದ್ದರು
ಶಾಸಕ ಹಾಲಾಡಿ ಭೇಟಿ :
ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಯವರು ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆಯಲ್ಲಿ ಭಾಗವಹಿಸಿದ್ದರು.