ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕರ್ಮಯೋಗ ಮತ್ತು ಭಕ್ತಿ ಯೋಗ ಎರಡೂ ಕೂಡಾ ಖಾರ್ವಿ ಸಮಾಜದಲ್ಲಿದೆ ಎಂದು ವಿದ್ವಾಂಸ ಸೋಂದಾ ಭಾಸ್ಕರ್ ಭಟ್ ಹೇಳಿದರು.
ಭಾನುವಾರ ಶ್ರೀದುರ್ಗಾದೇವಿ ಮಹಾಕಾಳಿ ಅಮ್ಮನವರ ದೇವಸ್ಥಾನ ಕೋಡಿಬೆಂಗ್ರೆ ಯಲ್ಲಿ 15 ನೇವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಆಶ್ಲೇಷಾಬಲಿ, ತುಲಾಭಾರ ಸೇವೆಯ ಬಳಿಕ ಜರುಗಿದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿ, ಖಾರ್ವಿ ಸಮಾಜ ಅನೇಕ ವರ್ಷದ ಹಿಂದೆ ಕೇವಲ ಕರ್ಮ ಯೋಗದಲ್ಲಿ ಮಾತ್ರ ಇದ್ದು, ಇದೀಗ ಭಕ್ತಿ ಮತ್ತು ಜ್ಞಾನ ಯೋಗದಲ್ಲಿ ಕೂಡಾ ಮುಂದುವರಿದಿದೆಮ ಕೇವಲ ಕೆಲವೇ ಜನರು ವಾಸಿಸುವ ಈ ಪ್ರದೇಶದಲ್ಲಿ ನೂರಾರು ವರ್ಷದಿಂದ ದೇವಸ್ಥಾನವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಆಡಳಿತ ಮಂಡಳಿಯ ಚಂದ್ರ ಶೇಖರ ಪಠೇಲ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದ ಸಾಧಕರಾದ ರಾಘವೇಂದ್ರ ಭಟ್ , ಮಾಧವ ಖಾರ್ವಿ , ಸತೀಶ್ ಖಾರ್ವಿ , ನಮೃತಾ ಮೇಸ್ತ ,ಸಂಪತ್ ಖಾರ್ವಿ , ಡಿಂಪಲ್ ಖಾರ್ವಿ , ಪ್ರಕಾಶ್ ಖಾರ್ವಿ, ನಾಗರಾಜ್ ಖಾರ್ವಿ , ಪ್ರಕಾಶ್ ಪಠೇಲ್ , ಜೊತ್ನಾ ಖಾರ್ವಿ ಇವರನ್ನು ಸನ್ಮಾನಿಸಲಾಯಿತು.
ಲಕ್ಷ್ಮಣ ಖಾರ್ವಿ , ಸುಭಾಷ್ ಖಾರ್ವಿ , ಪ್ರಕಾಶ್ ಪಠೇಲ್ , ರೇಣುಕಾ ಪಠೇಲ್ , ಕುಸುಮ ನಾಯ್ಕ್ , ಪ್ರಸಾದ್ ಕೋಡಿ ಬೆಂಗ್ರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧಿರೇಂದ್ರ ನಾಯ್ಕ್ ಸ್ವಾಗತಿಸಿ, ಶಯನ್ ಖಾರ್ವಿ ಪ್ರಾಸ್ತಾವಿಕ ಮಾತನಾಡಿ ಸುಪೇಕ್ಷಾ ಖಾರ್ವಿ ವಂದಿಸಿ , ಪ್ರೀತಿಕಾ ಮತ್ತು ಅರ್ಚನಾ ಕಾನೋಜಿ ಪರಿಚಯಿಸಿ ಮಾಲಿನಿ ಸತೀಶ್ ನಿರೂಪಿಸಿದರು.