Connect with us

Hi, what are you looking for?

Diksoochi News

ರಾಜ್ಯ

ನೇಮಕಾತಿಗೂ ಮುನ್ನ ಪಿ ಎಸ್ ಐ ಸಮವಸ್ತ್ರ ಧರಿಸಿ ಪೋಸ್ ಕೊಟ್ಟಿದ್ದ ಕಾನ್ಸ್ ಸ್ಟೇಬಲ್ ಅಮಾನತು

1

ಬೆಂಗಳೂರು : ಪಿಎಸ್ ಐ ನೇಮಕಾತಿ ಆದೇಶಕ್ಕೂ ಮುನ್ನವೇ ಪಿಎಸ್ ಐ ಸಮವಸ್ತ್ರ ಧರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ವಿವೇಕನಗರ ಠಾಣೆ ಕಾನ್ ಸ್ಟೇಬಲ್ ಬಸನಗೌಡ ಕರೇಗೌಡ ಅವರನ್ನು ಅಮಾನತು ಮಾಡಲಾಗಿದೆ.

545 ಪಿಎಸ್ ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27 ನೇ ರ್ಯಾಂಕ್ ಪಡೆದಿದ್ದ ಕಾನ್ಸ್ಟೇಬಲ್ ಹುದ್ದೆಗೆ ರಾಜೀನಾಮೆ ನೀಡದೆ, ಬಸನಗೌಡ ಕರೇಗೌಡ ಎರಡು ಸ್ಟಾರ್ ಸಮೇತ ಪಿಎಸ್ ಐ ಸಮವಸ್ತ್ರ ಧರಿಸಿದ್ದರು.

ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದ ಬಸನಗೌಡ ಕರೇಗೌಡ, ಸಮವಸ್ತ್ರ ಧರಿಸಿ ಊರಿನ ಕಾರ್ಯಕ್ರಮಗಳ ವೇದಿಕೆಯಲ್ಲಿ ಪಾಲ್ಗೊಂಡಿದ್ದರು.

Advertisement. Scroll to continue reading.

ಊರಿನಲ್ಲಿ ಸಮವಸ್ತ್ರ ಧರಿಸಿದ್ದ ಭಾವಚಿತ್ರಗಳೊಂದಿಗೆ ಫ್ಲೆಕ್ಸ್, ಬ್ಯಾನ್ ಗಳಲ್ಲಿ ಪೋಸ್ ಕೊಟ್ಟಿದ್ದರು. ಈ ಕುರಿತು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು.

ಈ ಹಿನ್ನೆಲೆಯಲ್ಲಿ ಪೊಲೀಸ್ ನಿಯಮ ಉಲ್ಲಂಘಿಸಿದ್ದಕ್ಕೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!