ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಿನೂತನ ಸಾಂಪ್ರದಾಯಕ ಶೈಲಿಯಲ್ಲಿ ರಚನೆಗೊಂಡ ಬಾರಕೂರು ಹೊಸಾಳ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಮೇ 22 ರಿಂದ ನಾನಾ ಧಾರ್ಮೀಕ ಕಾರ್ಯಕ್ರಮದೊಂದಿಗೆ ಜರುಗಿ ಗುರುವಾರ ಬೆಳಿಗ್ಗೆ ಪುನರ್ ಪ್ರತಿಷ್ಠೆ ಮತ್ತು ಸಹಸ್ರ ಕುಂಭಾಭಿಷೇಕ ಜರುಗಿತು.
ಪೂರ್ತಿಯಾಗಿ ಕೆಂಪು ಮುರ ಕಲ್ಲಿನಿಂದ ಮತ್ತು ಮರದಿಂದ ಶಾಸ್ತ್ರ ಸಮ್ಮತವಾಗಿ ನಿರ್ಮಾಣಗೊಂಡು ಹಳೆಯ ಪ್ರತೀ ಮೂರ್ತಿಗಳಿಗೆ ಪ್ರಕೃತಿ ನಿರ್ಮಿತ ಬಣ್ಣದ ಕಲ್ಲನ್ನು ಪುಡಿಮಾಡಿ ಗರಡಿಯಲ್ಲೆ ಬಣ್ಣ ನೀಡಿದ ಹಿರಿಮೆ ಬಾರಕೂರು ಗರಡಿಯದಾಗಿದೆ.
ಬುಧವಾರ ರಾತ್ರಿ ನಾನಾ ಪೂಜೆಗಳು ಜರುಗಿ ಶುಕ್ರವಾರ ಪ್ರತಿಷ್ಠಾಪನೆ ಗೊಂಡಿತು. ನಾನಾ ಭಾಗದ ಭಕ್ತರು ಇಂದು ಕ್ಷೇತ್ರವನ್ನು ಸಂದರ್ಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಚಿತ್ರತಂಡ ಇಂದು ಬೆಳಿಗ್ಗೆ ಗರಡಿಗೆ ಭೇಟಿ ನೀಡಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.
ಪ್ರತಿಷ್ಠಾಪನಾ ಮತ್ತು ಪೂಜಾ ಕಾರ್ಯದಲ್ಲಿ ಗೌತಮ್ ಹೆಗ್ಡೆ ಮತ್ತು ಸುಚೇತಾ ಗೌತಮ್ ಹೆಗ್ಡೆ ಭಾಗವಹಿಸಿದ್ದರು.
ತಂಡದಲ್ಲಿ ಭೋಜರಾಜ್ ವಾಮಂಜೂರು, ನಾಯಕ ವಿನೀತ್ ಶೆಟ್ಟಿ, ಚೈತ್ರಾ ಶೆಟ್ಟಿ, ನಿರ್ದೇಶಕ ರಾಹುಲ್ ಇದ್ದರು.
ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ. ವೈ. ಎಸ್. ಹೆಗ್ಡೆ .ಅಧ್ಯಕ್ಷ ರಾಘವ ಶೆಟ್ಟಿ, ಪ್ರಧಾನ ಪಾತ್ರಿ ರಘು ಪೂಜಾರಿ, ಉಪಾಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್ , ಸಿ. ಏ. ಗಣೇಶ್ ಕಾಂಚನ್, ಕೃಷ್ಣ ಪೂಜಾರಿ ಚೌಂಡಿಮನೆ, ರಾಜು ಟಿ. ಪೂಜಾರಿ , ಪ್ರಧಾನ ಕಾರ್ಯದರ್ಶಿ ರಕ್ಷಿತ್, ಜೊತೆ ಕಾರ್ಯದರ್ಶಿ ಪ್ರಮೋದ್ ಪೂಜಾರಿ, ಕೋಶಾಧಿಕಾರಿ ಜಗದೀಶ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.