ಪರ್ಕಳ : ಇಲ್ಲಿನ ಸ್ವಾಗತ್ ಹೋಟೆಲ್ ಬಳಿ ದೈತ್ಯ ಆಕೃತಿಯ ಕೋಲೇ ಬಸವ ಶಿರಡಿಯಿಂದ ಪರ್ಕಳ ಪೇಟೆಗೆ ಬಂದಿದೆ.
ದಿನನಿತ್ಯ ಊರೂರು ಸಂಚರಿಸುವ ಈ ಬಸವ ಇಂದು ಪರ್ಕಳ ಪೇಟೆಯಲ್ಲಿ ಕಂಡುಬಂದಿದೆ. ಈ ಬಸವ ನಮ್ಮ ಊರಿನಲ್ಲಿರುವ ಬಸವನಿಗಿಂತ ಆಳೆತ್ತರದಲ್ಲಿದ್ದು, ದೈತ್ಯಾಕಾರದ ಇದರ ಕೊಂಬು ಹಾಗೂ ಆಳೆತ್ತರದ ದೇಹ ಮತ್ತು ಮೈಕಟ್ಟು ಅತ್ಯಾಕರ್ಷಕವಾಗಿದ್ದು, ತನ್ನತ್ತ ಗಮನಸೆಳೆಯುತ್ತಿತ್ತು. ಹೋಟೆಲ್ ಮಾಲಕರ ಮೋಹನ್ ದಾಸ್ ನಾಯಕ್ ಪರ್ಕಳ ಬಾಳೆಹಣ್ಣು,ಹಾಗೂ ತಿಂಡಿ ತಿನಸು ನೀಡಿದರು. ಇದರ ಜೊತೆ ಮೂರು ವ್ಯಕ್ತಿಗಳು ಇದರ ಆರೈಕೆ ನೋಡುತ್ತಿದ್ದಾರೆ. ನಂತರ ಈ ಬಸವ ಕಾರ್ಕಳದತ್ತ ಪ್ರಯಾಣ ಬೆಳೆಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.