ವರದಿ : ಬಿ.ಎಸ್.ಆಚಾರ್ಯ
ಉಡುಪಿ : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಉಡುಪಿ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಎಂ., ಒಗ್ಗಟ್ಟು ಮತ್ತು ಸೇವಾ ಮನೋಬಾವದಿಂದ ಒಕ್ಕೂಟ ಉತ್ತಮ ಕೆಲಸ ನಿರ್ವಹಿಸಬೇಕೆಂದು ಕರೆ ನೀಡಿದರು.
ಹೊಸ ಒಕ್ಕೂಟಕ್ಕೆ ಸ್ವರ್ಣ ಸಂಜೀವಿನಿ ಉಡುಪಿ ತಾಲೂಕು ಮಟ್ಟದ ಒಕ್ಕೂಟ ಎಂದು ಹೆಸರಿಡಲಾಗಿದ್ದು, ಇದರ ಅಧ್ಯಕ್ಷರಾಗಿ ಲತಾ ಅಶೋಕ್ ಬಡಾನಿಡಿಯೂರು, ಕಾರ್ಯದರ್ಶಿಯಾಗಿ ಸುಕನ್ಯಾ ಶೆಟ್ಟಿ ತೆಂಕನಿಡಿಯೂರು, ಕೋಶಾಧಿಕಾರಿಯಾಗಿ ಮಾಲತಿ ನಾಯ್ಕ್ 80 ಬಡಗುಬೆಟ್ಟು, ಉಪಾಧ್ಯಕ್ಷರಾಗಿ ಪ್ರೇಮಲತಾ ಬೊಮ್ಮರಬೆಟ್ಟು, ಸಹ ಕಾರ್ಯದರ್ಶಿಯಾಗಿ ಮೀರಾ ಡಿ ಕೋಟ್ಯಾನ್ ಕಲ್ಯಾಣಪುರ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಸಹಾಯಕ ನಿರ್ದೇಶಕಿ ತಾಲೂಕು ಪಂಚಾಯತ್ ವಿಜಯಾ ಎನ್ ಆರ್ ಎಲ್ ಎಂ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ , ಏಕ ವ್ಯಕ್ತಿ ಸಮಾಲೋಚಕ ಪಾಂಡುರಂಗ ಉಪಸ್ಥಿತರಿದ್ದರು.
ಜಿಲ್ಲಾ ವ್ಯವಸ್ಥಾಪಕಿ ನವ್ಯಾ ಸ್ವಾಗತಿಸಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣ ನಿರೂಪಿಸಿ, ವಲಯ ಮೇಲ್ವಿಚಾರಕಿ ಸುಜಾತ ವಂದಿಸಿದರು.