ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿಯವರು ನೀಲಾವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಚಮಿ ಕಾನನ ಬಳಿ ನಾಗಲಿಂಗಪುಷ್ಪ ಗಿಡವನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬೇಬಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಬ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಮಾತನಾಡಿ, ಇಂದಿನ ಜನರು ಕೇವಲ ಇಂದಿನ ದಿನದ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ ಅದೇ ನಮ್ಮ ಹಿರೀಯರು ಮುಂದಿನ ತಲೆಮಾರಿನವರ ಕುರಿತು ಆಲೋಚನೆ ಮಾಡುತ್ತಿದ್ದರು ನಮ್ಮ ಹಿಂದಿನವರು ಬೆಳೆಸಿದ ಗಿಡ ಮರಗಳ ನೆರಳಿನಲ್ಲಿ ನಾವು ಬದುಕುತ್ತಿದ್ದೇವೆ . ನಾವು ಕೂಡಾ ನಮ್ಮ ಮುಂದಿನ ತಲೆಮಾರಿನವರೀಗೆ ಮರಗಿಡಗಳಗಳನ್ನು ಬೆಳೆಸಿರದಲ್ಲಿ ಮುಂದೆ ಗಾಳಿಯನ್ನು ಹಣ ಕೊಟ್ಟು ಪಡೆಯುವ ಕಾಲ ಬರಬರಬಹುದು. ಆ ಬಗ್ಗೆ ಯುವಜನತೆ ಪರಿಸರ ಬೆಳೆಸಲು ಮರಗಿಡವನ್ನು ಬೆಳೆಸಿ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಂದ್ರ ನೀಲಾವರ , ಅಗ್ನಿಶಾಮಕ ದಳದ ಸತೀಶ್ , ಪೋಲೀಸ್ ಅಧಿಕಾರಿ ಮುಕ್ತಾ , ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಇಬ್ರಾಹಿಂ ಪುರ , ಕ್ಷೇತ್ರ ಶಿಕ್ಷಣಾಧಿಕಾರಿ ಬಿಟಿ ನಾಯ್ಕ್ , ಗ್ರಹ ರಕ್ಷಕದಳದ ಸ್ಟೀವನ್ ಪ್ರಕಾಶ್ ಲೂಯಿಸ್ ಇನ್ನಿತರು ಉಪಸ್ಥಿತರಿದ್ದರು.