ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ರೋಟರಿ ಕ್ಲಬ್ 50 ನೇ ವರ್ಷದ ಆಚರಣೆ ಪ್ರಯುಕ್ತ ರೋಟರಿ ಸೋಷಲ್ ವೆಲ್ ಫೇರ್ ಟ್ರಸ್ಟ್ , ಹಾರಾಡಿ ಕಮಲಾ ಎ ಬಾಳಿಗಾ ಮೆಡಿಕಲ್ ಸೆಂಟರ್ ಇಲ್ಲಿಗೆ ರೂ. 40 ಲಕ್ಷ ವೆಚ್ಚದಲ್ಲಿ 3 ಡಯಾಲಿಸಿಸ್ ಯಂತ್ರ ವನ್ನು ಬುಧವಾರ ಕೊಡುಗೆಯಾಗಿ ನೀಡಿದರು.
ಉಡುಪಿ ಶಾಸಕ ಕೆ ರಘುಪತಿ ಭಟ್ ಈ ಸಂದರ್ಭ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಬ್ರಹ್ಮಾವರ ರೋಟರಿ ಸಂಸ್ಥೆ ಇಲ್ಲಿ ಡಯಾಲಿಸಿಸ್ ಯಂತ್ರ ನೀಡಿರುವುದು ತುಂಬಾ ಉಪಕಾರವಾಗಿದೆ. ರೋಟರಿ ಸಂಸ್ಥೆ ನಿಜವಾಗಿ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಸದಾ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದೆ ಎಂದರು.
ಜಿಲ್ಲಾ ಗವರ್ನರ್ ಎಂ. ಜಿ. ರಾಮಚಂದ್ರ ಮೂರ್ತಿ , ಕಮಲಾ ಏ ಬಾಳಿಗಾ ಟ್ರಸ್ಟಿಗಳಾದ ಆರ್. ವಿ. ಬಾಳಿಗಾ , ಡಾ, ಪಿ.ವಿ. ಭಂಡಾರಿ, ಡಾ.ಜಯಗೌರಿ, ಡಾ. ಮೇಘ ಪೈ , ರೋಟರಿಯ ಪದ್ಮನಾಭ ಕಾಂಚನ್, ವಿಜಯ ಕುಮಾರ್ ಶೆಟ್ಟಿ, ಹಾರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಬೆಂಗಳೂರು ಉದ್ಯಮಿ ನಾರಾಯಣ ಶೆಟ್ಟಿ, ಬ್ರಹ್ಮಾವರ ರೋಟರಿ ಅಧ್ಯಕ್ಷ ಹರೀಶ್ ಕುಂದರ್, ಕಾರ್ಯದರ್ಶಿ ಸತೀಶ್ ಶೆಟ್ಟಿ , ಅರುಣ್ ಕುಮಾರ್ ಶೆಟ್ಟಿ , ವಾಲ್ಟರ್ ಸಿರಿಲ್ ಪಿಂಟೋ , ರಾಜಾರಾಮ್ ಭಟ್ , ಬಿ.ಎಂ ಭಟ್ ಇನ್ನಿತರರು ಉಪಸ್ಥಿತರಿದ್ದರು.