ಕುಂದಾಪುರ : ಗದ್ದೆಯಲ್ಲಿ ಕೆಲಸ ಮಾಡಿತ್ತಿದ್ದ ವೇಳೆ ಟ್ರಾಕ್ಟರ್ ಚಾಲಕ ಮೃತಪಟ್ಟಿರುವ ಘಟನೆ ಕೆರಾಡಿ ಗ್ರಾಮದಲ್ಲಿ ನಡೆದಿದೆ. ಕಾಂತರಾಜು ಮೃತ ಚಾಲಕ.
ದೀಟಿ ಗ್ರಾಮದವರೊಬ್ಬರಿಂದ ಗದ್ದೆಯನ್ನು ಉಳುಮೆ ಮಾಡಲು ಗೇಣಿ ಪಡೆದುಕೊಂಡು ಕೃಷಿಕರೊಬ್ಬರು ಕೃಷಿ ಕಾರ್ಯಾರಂಭಿಸಿದ್ದರು. ಬೆಳ್ಳಾಲದ ಒಬ್ಬರಿಂದ ಟ್ರಾಕ್ಟರ್ನ್ನು ಬಾಡಿಗೆಗೆ ಪಡೆದಿದ್ದರು. ಬುಧವಾರ ಬೆಳಿಗ್ಗೆ ಚಾಲಕ ಕಾಂತುರಾಜು ಟ್ರಾಕ್ಟರ್ ಬಳಸಿ ಗದ್ದೆ ಉಳುಮೆ ಮಾಡಿದ್ದಾರೆ. ಮಧ್ಯಾಹ್ನ ಊಟ ಮಾಡಲು ಕೆಲಸ ನಿಲ್ಲಿಸಿದ್ದು ಕಾಂತರಾಜು ರವರು ಟ್ರಾಕ್ಟರ್ನ್ನು ನಿಲ್ಲಿಸಿ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದಾಗ ಅಲ್ಲಿಯೇ ಕುಸಿದು ಬಿದ್ದು ಅಸ್ವಸ್ಥರಾಗಿದ್ದಾರೆ.
ಕೂಡಲೇ ಅವರನ್ನು ಖಾಸಗಿ ಅಂಬುಲೆನ್ಸ್ನಲ್ಲಿ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ದಾರಿಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Advertisement. Scroll to continue reading.