ಪರ್ಕಳ : ಉಡುಪಿಯಲ್ಲಿ ಮಳೆ ಬಿಡದೆ ಸುರಿಯುತ್ತಿದೆ. ಪರ್ಕಳದ ಮೀನು ಮಾರುಕಟ್ಟೆಯ ಬಳಿ ಬಾದಾಮಿ ಮರವೊಂದು ಬುಡ ಸಮೇತವಾಗಿ ಆಶಾ ಜನರಲ್ ಸ್ಟೋರ್ ಅಂಗಡಿಯ ತಗಡಿನ ಸೀಟಿನ ಮೇಲೆ ಬಿದ್ದಿದೆ. ಪರಿಣಾಮ ತುಂಬಾ ಹಾನಿಯಾಗಿದೆ.
ಅದೇ ರೀತಿ ಪರ್ಕಳ ಪೇಟೆಯಲ್ಲಿ ಉದ್ಯಮಿ ಗೋಪಾಲ್ ಆಚಾರ್ಯ ತೆಂಗಿನ ಮರ ಒಂದು ಬುಡ ಸಮೇತ ಗಾಳಿ ಮಳೆಗೆ ಆಯತಪ್ಪಿ ಪಕ್ಕದಲ್ಲಿರುವ ಪರ್ಕಳದ ಅಂಚೆ ಕಚೇರಿಯ ಕಟ್ಟಡದ ಮೇಲೆರಗಿ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.