ಬನ್ನಂಜೆ : ಉಡುಪಿ ಜಿಲ್ಲೆಯಲ್ಲಿ ನಿನ್ನೆಯಿಂದ ಬಿಡದೆ ಮಳೆ ಸುರಿಯುತ್ತಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಕಲ್ಸಂಕ ತೋಡು ಹರಿಯುವ ಬನ್ನಂಜೆ ಸಮೀಪದ ಮೂಡನಿಡಂಬೂರು ಬ್ರಹ್ಮ ಬೈದರ್ಕಳ ಗರೋಡಿ, ಸುತ್ತ ಮುತ್ತಲ ಪ್ರದೇಶ ಜಲಾವೃತವಾಗಿದೆ. ತೋಡು ನದಿಯಂತೆ ತುಂಬಿ ಹರಿಯುತ್ತಿದೆ.
ಇಲ್ಲಿನ ಸಮೀಪದ ಮನೆಗಳ ಸುತ್ತ ನೀರು ಹರಿಯುತ್ತಿದೆ. ಹೀಗೆ ಮಳೆ ಮುಂದುವರೆದರೆ ಇಲ್ಲಿನ ಮಂದಿ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ.
ಪ್ರತಿ ಮಳೆಗಾಲದ ಸಮಸ್ಯೆ :
ಮಳೆ ಬಂದಾಗ ಪ್ರತಿವರ್ಷವೂ ಇಲ್ಲಿನ ನಿವಾಸಿಗಳ ಗೋಳು ಇದೆ. ತೋಡು ಭರ್ತಿಗೊಂಡು ಮನೆ ಜಲಾವೃತಗೊಳ್ಳುತ್ತದೆ. ಮಳೆಗಾಲದಲ್ಲಿ ಜನರು ಆತಂಕದಲ್ಲಿ ದಿನದೂಡಬೇಕಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಮಾತ್ರ ಮೌನವಾಗಿರುವುದು ಇಲ್ಲಿನ ವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Advertisement. Scroll to continue reading.
In this article:bannanje, Diksoochi news, diksoochi Tv, diksoochi udupi, Moodanidamburu
Click to comment