ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಉಡುಪಿ ಜಿಲ್ಲೆಯ ಉತ್ತರಭಾಗವಾದ ಬ್ರಹ್ಮಾವರ ತಾಲೂಕಿನಲ್ಲಿ ಹರಿಯುವ ಸೀತಾ, ಸ್ವರ್ಣ ಮತ್ತು ಮಡಿಸಾಲು ಹೊಳೆ ನೀರು ಉಕ್ಕಿ ಹರಿಯುತ್ತಿದೆ.
ತಗ್ಗು ಪ್ರದೇಶವಾದ ಉಪ್ಪೂರು, ಉಗ್ಗೆಲ್ಬೆಟ್ಟು , ನಂದನ ಕುದ್ರು , ಬಾವಲಿ ಕುದ್ರು, ರಾಮಣ್ಣ ಕುದ್ರು, ಬೆಣ್ಣೆಕುದ್ರು ಪ್ರದೇಶ ಬಹುತೇಕ ಮುಳುಗಡೆ ಹೊಂದಿದೆ.
ನದಿತೀರ ಪ್ರದೇಶವಾದ ಕಚ್ಚೂರು, ಕೂರಾಡಿ, ಹನೆಹಳ್ಳಿ , ಹಂದಾಡಿ ಭಾಗದ ಬಹುತೇಕ ಕಡೆಯಲ್ಲಿ ಪ್ರವಾಹದ ನೀರು ಉಕ್ಕೇರುತ್ತಿದ್ದು, ಈಗಾಗಲೆ ಅಪಾಯದ ಮಟ್ಟ ತಲುಪಿದ್ದು, ಇನ್ನೂ ಕೂಡಾ ಪ್ರವಾಹ ರುತ್ತಲೇ ಇದ್ದರೆ ಬಹುತೇಕ ಜನರು ತಗ್ಗು ಪ್ರದೇಶದಿಂದ ಏರು ಜಾಗಕ್ಕೆ ಹೋಗಬೇಕಾದ ಅಗತ್ಯತೆ ಇದೆ.
ಬ್ರಹ್ಮಾವರ ತಾಲೂಕು ಭಾಗದ ಪ್ರವಾಹದ ಬಹುತೇಕ ಕಡೆಗಳಿಗೆ ತಹಶೀಲ್ದಾರ ರಾಜಶೇಖರ ಮೂರ್ತಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯವರ ಜೊತೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ಆಡಳಿತ ಅಪಾಯದ ಮುನ್ಸೂಚನೆಗೆ ಸಕಲ ಸಿದ್ದತೆಯನ್ನು ತಯಾರು ಮಾಡಿಕೊಂಡಿದೆ ಎಂದು ಈ ಸಂದರ್ಭ ತಿಳಿಸಿದರು.