ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಜಿಲ್ಲಾ ಪಂಚಾಯತ್ ಉಡುಪಿ ,ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ, ನೆಹರು ಯುವ ಕೇಂದ್ರ ಉಡುಪಿ, ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಆಹಾರ ಪೌಷ್ಟಿಕತೆ ಆರೋಗ್ಯ ಹಾಗೂ ನೀರು ನೈರ್ಮಲ್ಯ ಕಾರ್ಯಕ್ರಮದಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಆಟಿಡೊಂಜಿ ಕೂಟ ಕಾರ್ಯಕ್ರಮ ಸಮೃದ್ಧಿ ಮಹಿಳಾ ಮಂಡಳಿಯಲ್ಲಿ ಶನಿವಾರ ಜರುಗಿತು.
ಕಾರ್ಯಕ್ರಮದಲ್ಲಿ ಆಟಿ ತಿಂಗಳು ಮತ್ತು ಆಹಾರದ ಕುರಿತು ಡಾ ಪ್ರಿಯಾಂಕ ಮಾತನಾಡಿ ನಮ್ಮ ಪರಿಸರದಲ್ಲಿ ಪರಿಸರಕ್ಕೆ ಸರಿಯಾಗಿ ಸಿಗುವ ಆಹಾರ ವಸ್ತುಗಳನ್ನು ಬಳಸಿದಲ್ಲಿ ಸಮತೋಲನ ಆರೋಗ್ಯ ಇರುತ್ತದೆ ನಮ್ಮ ಪೂರ್ವಿಕರು ಅನೇಕ ವರ್ಷದ ಹಿಂದೆ ಕಂಡುಕೊಡುವುದನ್ನು ನಾವು ಪಾಲಿಸ ಬೇಕು. ಆಟಿ ತಿಂಗಳಲ್ಲಿ ಮಾತ್ರವೇ ಆಹಾರ ಸೇವನೆ ಕ್ರಮ ಮಾತ್ರ ಅಲ್ಲ ಪ್ರತೀ ಋತುಮಾನಕ್ಕೆ ಸರಿಯಾಗಿ ಆಹಾರ ಕ್ರಮವನ್ನು ಆಯುರ್ವೇದ ತಿಳಿಸಿದೆ ಎಂದರು.
ಎನ್ .ಆರ್ .ಎಲ್ .ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಮಾತನಾಡಿ,
ಜಿಲ್ಲೆಯಲ್ಲಿ ಪ್ರಥಮ ಕಾರ್ಯಕ್ರಮವಾದ ಸಂಜೀವಿನಿ ಸಂಘದ ಮಹಿಳೆಯರ ಆಟಿಡೊಂಜಿ ಕೂಟ ಕಾರ್ಯಕ್ರಮದಂತೆ ಆಟೋಟ ಸ್ಪರ್ಧೆಯನ್ನು ಹಮ್ಮಿಕೊಂಡಲ್ಲಿ ಸಂಘಟನೆಗೆ ಹೆಚ್ಚು ಬಲ ಬರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಕು.ಸನ್ಯಾರನ್ನು ಸನ್ಮಾನಿಸಲಾಯಿತು.
ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಭಟ್ , ಸಮೃದ್ಧಿ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಭಟ್, ಚೇರ್ಕಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಷ್ ಖಾರ್ವಿ
ಉಡುಪಿ ವಲಯ ಮೇಲ್ವಿಚಾರಕಿ ಸ್ವಾತಿ, ಜಯಮಾಲಾ ಉಪಸ್ಥಿತರಿದ್ದರು.
ಸಂಜೀವಿನಿ ಸಂಘದ ಮಹಿಳೆಯರು ತಯಾರು ಮಾಡಿದ ೨೬ ಕ್ಕೂ ಹೆಚ್ಚು ಬಗೆಯ ಖಾದ್ಯ ಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು .