Connect with us

Hi, what are you looking for?

Diksoochi News

ರಾಷ್ಟ್ರೀಯ

ತಂದೆ – ತಾಯಿ ನಡುವೆ ವೈಮನಸ್ಯ; ಮಗುವಿಗೆ ನಾಮಕರಣ ಮಾಡಿದ ಕೇರಳ ಹೈಕೋರ್ಟ್

2

ಕೊಚ್ಚಿ: ತಂದೆ ಮತ್ತು ತಾಯಿ ಬೇರೆಯಾಗಿ, ಮಗುವಿಗೆ ಹೆಸರಿಡುವ ವಿಚಾರದಲ್ಲಿ ಒಮ್ಮತ ಮೂಡದ ಹಿನ್ನೆಲೆ ಮೂರು ವರ್ಷದ ಹೆಣ್ಣು ಮಗುವಿಗೆ ಸ್ವತಃ ಕೇರಳ ಹೈಕೋರ್ಟೇ ನಾಮಕಾರಣ ಮಾಡಿದೆ. 

ಈ ಸಂಬಂಧ ಕಳೆದ ತಿಂಗಳು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್, ‘ಸದ್ಯಕ್ಕೆ ತಾಯಿಯ ಆರೈಕೆಯಲ್ಲಿರುವ ಮಗುವಿಗೆ ಆಕೆಯ ತಾಯಿ ನೀಡುವ ಹೆಸರಿಗೆ ಮಹತ್ವ ನೀಡಲಾಗುತ್ತದೆ. ಇದೇ ವೇಳೆ ಪಿತೃತ್ವದ ಕುರಿತು ಯಾವುದೇ ವಿವಾದ ಹುಟ್ಟಿಕೊಳ್ಳದಂತೆ ನೋಡಿಕೊಳ್ಳಲು ತಂದೆ ನೀಡುವ ಹೆಸರನ್ನು ಪರಿಗಣಿಸಲಾಗುತ್ತದೆ’ ಎಂದು ಆದೇಶಿಸಿದ್ದರು. 

ಏನಿದು ಪ್ರಕರಣ?

Advertisement. Scroll to continue reading.

2020ರ ಫೆಬ್ರುವರಿ 12ರಂದು ಮಗುವಿನ ಜನಿಸಿತ್ತು. ಈ ವೇಳೆ ಮಗುವಿನ ತಂದೆ ಮತ್ತು ತಾಯಿ ಸಂಬಂಧದಲ್ಲಿ ಬಿರುಕು ಮೂಡಿತ್ತು.

ತಮ್ಮ ಮಗುವಿಗೆ ಹೆಸರಿಡುವ ವಿಚಾರವು ದಂಪತಿ ಮಧ್ಯೆ ವೈಮನಸ್ಸಿಗೆ ಕಾರಣವಾಗಿತ್ತು. ಇದರಿಂದಾಗಿ ಮಗುವಿನ ಜನನ ಪ್ರಮಾಣಪತ್ರದಲ್ಲಿ ಹೆಸರು ಉಲ್ಲೇಖವಿರಲಿಲ್ಲ. ಮಗುವಿನ ಹೆಸರು ನೋಂದಣಿಗೆ ಆಕೆಯ ತಾಯಿ ಯತ್ನಿಸಿದ್ದರು. ಆದರೆ, ಜನನ ಮತ್ತು ಮರಣ ನೋಂದಣಾಧಿಕಾರಿ ಮಗುವಿನ ಹೆಸರು ನೋಂದಣಿಗೆ ತಂದೆ ಮತ್ತು ತಾಯಿ ಇಬ್ಬರೂ ಹಾಜರಿರಬೇಕು ಎಂದು ಹೇಳಿದ್ದರು. 

ಹೀಗಾಗಿ ಮಗುವಿನ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು. ಸೆಪ್ಟೆಂಬರ್ 5 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮಗುವಿನ ಹೆಸರಿನ ವಿಚಾರದಲ್ಲಿ ಮಗುವಿನ ಕ್ಷೇಮವೇ ಮುಖ್ಯವಾಗಿರಬೇಕೇ ಹೊರತು ಪೋಷಕರ ಹಕ್ಕು ಮುಖ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅಂತಾರಾಷ್ಟ್ರೀಯ

0 ನವದೆಹಲಿ : ಫೇಸ್ ಬುಕ್ ಗೆಳೆಯನಿಗಾಗಿ ಪಾಕಿಸ್ತಾನಕ್ಕೆ ಹೋಗಿ ವಿವಾಹವಾಗಿದ್ದ ಅಂಜು ಇದೀಗ ಭಾರತಕ್ಕೆ ಮರಳಿದ್ದಾರೆ. ಖೈಬರ್ ಪಖ್ತುಂಖ್ವಾದಲ್ಲಿ ತನ್ನ ಪತಿ ಪಾಕಿಸ್ತಾನದ ಪ್ರಜೆ ನಸ್ರುಲ್ಲಾ ಅವರೊಂದಿಗೆ ವಾಸಿಸುತ್ತಿರುವ 34 ವರ್ಷದ...

ಜ್ಯೋತಿಷ್ಯ

0 ದಿನಾಂಕ : ೩೦-೧೧-೨೩, ವಾರ : ಗುರುವಾರ, ತಿಥಿ: ತದಿಗೆ, ನಕ್ಷತ್ರ: ಆರಿದ್ರಾ ನೀವು ಇತರರಿಗೆ ಸಹಾಯ ಮಾಡಿ ಮೆಚ್ಚುಗೆ ಪಡೆಯುತ್ತೀರಿ. ವ್ಯಾಪಾರದಲ್ಲಿ ಹೊಸ ಪಾಲುದಾರರನ್ನು ಸಿಗುತ್ತಾರೆ. ಆದಾಯದ ಮೂಲಗಳು ಹೆಚ್ಚಾಗಬಹುದು....

ಜ್ಯೋತಿಷ್ಯ

0 ದಿನಾಂಕ : ೨೯-೧೧-೨೩, ವಾರ : ಬುಧವಾರ, ತಿಥಿ: ಬಿದಿಗೆ, ನಕ್ಷತ್ರ: ಮೃಗಶಿರಾ ನೀವು ಇಂದು ನಿಮ್ಮ ಸಂಗಾತಿಗೆ ಕೆಲವು ಉಡುಗೊರೆಗಳನ್ನು ನೀಡಬಹುದು. ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಹಣ ಬರಲಿದೆ. ಸಹೋದರ...

ಸಿನಿಮಾ

1 ಬಿಗ್ ಬಾಸ್ ಸೀಸನ್ 10ನಲ್ಲಿಜಗಳ, ಪರಸ್ಪರ ಕಿತ್ತಾಟ ಕಂಡುಬರುತ್ತಿದೆ. ಈ ಬಾರಿ ವಿನಯ್ ಹಾಗೂ ಸ್ನೇಹಿತ್ ಸಂಗಡ ಬಿಟ್ಟು ನಮ್ರತಾ ಗೌಡ ಡ್ರೋನ್ ಪ್ರತಾಪ್ ತಂಡ ಸೇರಿದ್ದರು. ಆದರೆ, ಕ್ಯಾಪ್ಟನ್ ಟಾಸ್ಕ್‍ನಲ್ಲಿ...

ರಾಜ್ಯ

2 ಬೆಂಗಳೂರು: ಯಾವುದನ್ನೂ ಉಚಿತವಾಗಿ ನೀಡಬಾರದು. ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳಿಗೆ ಖಂಡಿತಾ ನನ್ನ ವಿರೋಧವಿಲ್ಲ, ಆದರೆ ಅದನ್ನು ಉಚಿತವಾಗಿ ಪಡೆದುಕೊಂಡವರು ಸಮಾಜಕ್ಕೆ ಉಪಕಾರವಾಗುವಂತೆ ಕೆಲಸ ಮಾಡಿ ಹಿಂತಿರುಗಿ ಕೊಡಬೇಕು. ಆಗ...

error: Content is protected !!