Connect with us

Hi, what are you looking for?

Diksoochi News

ಕರಾವಳಿ

ಕಾರ್ಕಳ : ಹೊಳೆಗೆ ಹಾರಿ ಯುವಕ ಆತ್ಮಹತ್ಯೆ

0

ಕಾರ್ಕಳ : ಹೊಳೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಸಂದೇಶ್ ಶೆಟ್ಟಿ( 30 ) ಆತ್ಮಹತ್ಯೆ ಮಾಡಿಕೊಂಡವರು.

ಸಂದೇಶ ಶೆಟ್ಟಿ  7  ವರ್ಷಗಳಿಂದ  ಮಾನಸಿಕ  ಸಮಸ್ಯೆಯಿಂದ ಬಳಲುತ್ತಿದ್ದು, ಈ ಕುರಿತು ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಅಲ್ಲದೇ  ಅವರಿಗೆ ಮದ್ಯಪಾನ  ಮಾಡುವ ಚಟ ಇತ್ತು ಎನ್ನಲಾಗಿದೆ.  

Advertisement. Scroll to continue reading.

ಸೆಪ್ಟಂಬರ್ 30 ರಂದು  ರಾತ್ರಿ  9  ಗಂಟೆಗೆ   ದುರ್ಗ  ಗ್ರಾಮದ  ಮಲೆಹಿತ್ಲು  ಎಂಬಲ್ಲಿ  ಮನೆಯಿಂದ  ಕಾಣೆಯಾಗಿದ್ದರು. ಅ.4 ರಂದು ಕಾರ್ಕಳ ಕಸಬಾ  ಗ್ರಾಮದ  ಕಾವೇರಡ್ಕ  ಎಂಬಲ್ಲಿ ಹೊಳೆಯಲ್ಲಿ  ಮೃತದೇಹ  ಸಿಕ್ಕಿದ್ದು. ಸಂದೇಶ  ಶೆಟ್ಟಿಗೆ   ಮಾನಸಿಕ ಸಮಸ್ಯೆ ಇದ್ದು  ಅವರು ಸೆ.30 ರಂದು   ಮನೆಯ ಹತ್ತಿರ   ಇರುವ   ದುರ್ಗ  ಹೊಳೆಗೆ   ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಹೋದರ ನೀಡಿರುವ ದೂರಿನನ್ವಯ  ಕಾರ್ಕಳ ನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!