Connect with us

Hi, what are you looking for?

Diksoochi News

ರಾಜ್ಯ

ಕಾರು ತೊಳೆಯಲು ಹೋಗಿ ವಿದ್ಯುತ್ ತಗುಲಿ ಬಾಲಕ ಸಾವು

1

ಬೆಳಗಾವಿ : ಪೇಪರ್ ಹಾಕಲು ಹೋಗಿದ್ದ ಬಾಲಕನಿಗೆ ಕರೆಂಟ್ ತಗುಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಅನಗೋಳ ನಿವಾಸಿ ಬಾಲಕ ರಜತ್ ಗೌರವ್ (14) ಮೃತ ಬಾಲಕ.

8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಜತ್ ಶಾಲೆಗೆ ರಜೆ ಇದ್ದ ಕಾರಣ, ಬೆಳಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಎಂದಿನಂತೆ ಚೌಗಲೆ ಎಂಬವರ ಮನೆಗೆ ಪೇಪರ್ ಹಾಕಲು ತೆರಳಿದಾಗ, ಆ ಮನೆಯವರು ಅಮಾವಾಸೆ ಹಿನ್ನೆಲೆ ಕಾರು ತೊಳೆಯಲು ಹೇಳಿದ್ದಾರೆ. ಅದರಂತೆ, ಕಾರು ತೊಳೆಯಲೆಂದು ಹೋದಾಗ ಕಾರಿನ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

Advertisement. Scroll to continue reading.

ಹಣ ಕೊಡುವುದಾಗಿ ಹೇಳಿದ್ದಕ್ಕೆ ಬಾಲಕ ಈ ವೇಳೆ ಕಾರು ತೊಳೆಯಲು ಹೋಗಿದ್ದಾನೆ ಎಂದು ವರದಿಯಾಗಿದೆ.

ರಜತ್ ಪೇಪರ್ ಹಾಕಿದ ಮೇಲೆ ಯಲ್ಲಪ್ಪ ಚೌಗಲೆ ಎಂಬುವವರು ಕಾರು ತೊಳೆಯಲು ಹೇಳಿದ್ದಾರೆ. ಹಣ ಕೊಡುವುದಾಗಿ ಹೇಳಿದಕ್ಕೆ ಬಾಲಕ ಕಾರು ತೊಳೆಯಲು ಮುಂದಾಗಿದ್ದ. ಈ ವೇಳೆ ಮೋಟರ್‌ನ ವೈಯರ್ ತುಂಡಾಗಿದ್ದನ್ನು ಮುಟ್ಟಿದಾಗ ಶಾಕ್ ಹೊಡೆದಿದೆ.

ಕೂಡಲೇ ಬಾಲಕ ರಜತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ರಜತ್ ಕೊನೆಯುಸಿರೆಳಿದಿದ್ದಾನೆ. ಎಲ್ಲಪ್ಪ ಚೌಗಲೆ ವಿರುದ್ಧ ಬಾಲಕನ ಪೋಷಕರು ಆರೋಪ ಮಾಡಿದ್ದು, ಟಿಲಕವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಬಾಲಕನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!