ಶಿರ್ವ : ಕಿಟಕಿ ಮುರಿದು ಮನೆಯೊಳಗೆ ನುಗ್ಗಿ 8 ಲ.ರೂ. ಮೌಲ್ಯದ ಚಿನ್ನಾಭರಣ ಕದ್ದಿರುವ ಘಟನೆ ಪಿಲಾರು ಗ್ರಾಮದಲ್ಲಿ ನಡೆದಿದೆ.
ಅರುಣ್ ವಿಜಯ್ ಎಂಬವರ ಹಳೆಯ ಹಂಚಿನ ಮನೆಯ ಅಡುಗೆ ಕೋಣೆಯ ಮರದ ಕಿಟಕಿಯ ಪಟ್ಟಿಯನ್ನು ಯಾರೋ ಕಳ್ಳರು ಕಿತ್ತು ತೆಗೆದು ಅದರ ಮೂಲಕ ಒಳಪ್ರವೇಶಿಸಿದ್ದಾರೆ. ಬಳಿಕ ಗೋದ್ರೆಜ್ ಅಲ್ಮೇರಾದ ಬೀಗ ತೆರೆದು ಅದರ ಸೇಫ್ ಲಾಕರ್ನಲ್ಲಿದ್ದ ಅಂದಾಜು ಮೌಲ್ಯ 8,00,500/- ರೂ. ಬೆಲೆಯ ವಿವಿಧ ರೀತಿಯ ಒಟ್ಟು 179.4 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.