ಶಿವಮೊಗ್ಗ: ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಕ್ಸ್ ಗಳ ಬೀಗವನ್ನು ಸ್ಫೋಟಗೊಳಿಸಿ ತೆರೆಯಲಾಗಿದೆ.
ಭಾನುವಾರ ಕಂಡುಬಂದ ಮೇಡ್ ಇನ್ ಬಾಂಗ್ಲಾದೇಶ ಬರಹವುಳ್ಳ ಎರಡು ಬಾಕ್ಸ್ ಗಳು ಆತಂಕವನ್ನು ಸೃಷ್ಟಿ ಮಾಡಿದ್ದವು. ಇನ್ನು ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಶಿವಮೊಗ್ಗಕ್ಕೆ ತೆರಳಿತ್ತು. ಆದರೆ, ಮಳೆ ಜೋರಾಗಿ ಸುರಿಯುತ್ತಿರೊ ಕಾರಣ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು. ಇಂದು ಬೆಳಗಿನ ಜಾವ ಕ್ರಷರ್ ಕಲ್ಲು ಸ್ಪೋಟಕ ಮಾದರಿಯಲ್ಲಿ ಬೀಗ ಒಡೆಯಲಾಗಿದೆ. ತಡರಾತ್ರಿ 2:20ಕ್ಕೆ ಮೊದಲ ಪೆಟ್ಟಿಗೆ ಮತ್ತು ಬೆಳಗಿನ ಜಾವ 3.24ಕ್ಕೆ ಎರಡನೇ ಪೆಟ್ಟಿಗೆಯ ಬೀಗ ಒಡೆಯಲಾಗಿದೆ.
ಈ ಬಾಕ್ಸ್ ಗಳಲ್ಲಿ ಬಿಳಿ ಪೌಡರ್ ಮಾದರಿಯ ವಸ್ತು ಪತ್ತೆಯಾಗಿದೆ. ಸದ್ಯಕ್ಕೆ ಈ ಪೌಡರ್ ಯಾವುದು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳು ಈ ಪೌಡರ್ ಮಾದರಿಯನ್ನು ಎಫ್ಎಸ್ಎಲ್ ಗೆ ಕಳುಹಿಸಲು ನಿರ್ಧರಿಸಿದ್ದಾರೆ. ಎಫ್ಎಸ್ಎಲ್ ವರದಿ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ.
ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿ ಶಿವಮೊಗ್ಗದ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಅಧಿಕಾರಿಗಳು ಬಾಕ್ಸ್ ತೆರೆಯಲಾಗಿದ್ದು, ನಿರಾಳವಾಗಿದೆ.