Connect with us

Hi, what are you looking for?

Diksoochi News

ಕರಾವಳಿ

ಪಟ್ಲ ಯು.ಎಸ್‌.ನಾಯಕ್‌ ಪ್ರೌಢ ಶಾಲೆ : ನ.10 ರಂದು ಇಂದಿರಾ ಹಾಲಂಬಿ ಅವರಿಗೆ ಸಂಸ್ಕೃತಿ ಸಿರಿ ಪ್ರಶಸ್ತಿ ಪ್ರದಾನ

0

ಪಟ್ಲ : ರೂರಲ್ ಎಜುಕೇಶನ್ ಸೊಸೈಟಿ, ವಿದ್ಯಾ ನಗರ, ಪಟ್ಲ, ಯು.ಎಸ್.ನಾಯಕ್ ಪ್ರೌಢ ಶಾಲೆ‌ ಪಟ್ಲ, ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದಲ್ಲಿ ಸಾಹಿತ್ಯ ಸಂಭ್ರಮ 2023 ಕಾರ್ಯಕ್ರಮ ನವೆಂಬರ್ 10 ರಂದು ಶುಕ್ರವಾರ ಅಪರಾಹ್ನ 3 ಗಂಟೆಗೆ ಯು. ಎಸ್. ನಾಯಕ್ ಪ್ರೌಢ ಶಾಲೆ ಪಟ್ಲದಲ್ಲಿ ನಡೆಯಲಿದೆ.

ಈ ಸಂದರ್ಭ ಇಂದಿರಾ ಹಾಲಂಬಿ ಅವರಿಗೆ ಸಂಸ್ಕೃತಿ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪಡುಬಿದ್ರಿ ಗಣಪತಿ ಹೈಸ್ಕೂಲ್ ನ ಡಾ| ರಾಘವೇಂದ್ರ ರಾವ್ ಇವರಿಂದ ರಾಮಾಯಣ ಉಪನ್ಯಾಸ, ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.

Advertisement. Scroll to continue reading.

ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಅಶೋಕ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪಟ್ಲ ರೂರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ| ಕೆ. ನಾರಾಯಣ ಶೆಣೈ, ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ, ಪಟ್ಲ ರೂರಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಜಯರಾಜ್ ಶೆಟ್ಟಿ, ಪಟ್ಲ ಯು.ಎಸ್‌.ನಾಯಕ್‌ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ್ ಪ್ರಭು ಉಪಸ್ಥಿತರಿರಲಿದ್ದಾರೆ.

ಈ ವೇಳೆ ಉಡುಪಿ ಸೀತಾ ಬುಕ್ ಸೆಂಟರ್‌‌ನಿಂದ ಪುಸ್ತಕ ಪ್ರದರ್ಶನ ನಡೆಯಲಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!