Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೭-೧೧-೨೩, ವಾರ : ಶುಕ್ರವಾರ, ತಿಥಿ: ಚೌತಿ, ನಕ್ಷತ್ರ: ಪೂರ್ವ ಆಷಾಢ

ಇಂದು ನೀವು ಹೊರಗೆ ಸುತ್ತಾಡಲು ಹೋಗಬಹುದು. ಹೊಸದನ್ನು ಕಲಿಯಲು ಪ್ರಯತ್ನಿಸುವಿರಿ. ಕುಟುಂಬ ಸದಸ್ಯರಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ಉಷ್ಣ, ಗ್ಯಾಸ್ಟ್ರಿಕ್‌ ಸಮಸ್ಯೆಗಳು ಬರಬಹುದು. ರಾಮನ ನೆನೆಯಿರಿ.

ಇಂದು ನೀವು ಏನನ್ನಾದರೂ ಮಾಡಲು ಬಯಸುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಯಂತೆ ಇರುವುದಿಲ್ಲ. ಸ್ನೇಹಿತರ ಮೂಲಕ ಉತ್ತಮ ಸಂದೇಶಗಳನ್ನು ಸ್ವೀಕರಿಸಬಹುದು. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಉದ್ಯೋಗದಲ್ಲಿ ಹೆಚ್ಚಿನ ಕೆಲಸ ಇರುತ್ತದೆ. ನೀವು ಯಾವುದೇ ಕಾರಣವಿಲ್ಲದೆ ಪ್ರಯಾಣಿಸಬೇಕಾಗಬಹುದು. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನೀವು ತಂದೆಯ ಬೆಂಬಲ ಮತ್ತು ಆಶೀರ್ವಾದವನ್ನು ಪಡೆಯುತ್ತೀರಿ. ಶಿವನ ಆರಾಧಿಸಿ.

ಕೆಲಸ ಬದಲಾಯಿಸಲು ಸಮಯ ತುಂಬಾ ಒಳ್ಳೆಯದು. ಕಾನೂನಾತ್ಮಕ ವಿವಾದಗಳಿಂದ ಮುಕ್ತಿ ಸಿಗುವ ಪ್ರಬಲ ಸಾಧ್ಯತೆ ಇದೆ. ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ದೇವಿಯ ನೆನೆಯಿರಿ.

ಮಾಧ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಅಧಿಕ ಕೆಲಸದೊತ್ತಡ. ನಿಮ್ಮ ಕೋಪದ ಸ್ವಭಾವ ಬದಲಿಸಿ. ಅಸೂಯೆಯಿಂದ ಯಾರನ್ನೂ ಟೀಕಿಸಬೇಡಿ. ನೀವು ಸಾಲವಾಗಿ ಕೊಟ್ಟ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ. ವಿಷ್ಣುವನ್ನು ನೆನೆಯಿರಿ.

ದೊಡ್ಡ ವ್ಯಾಪಾರ ಒಪ್ಪಂದದ ಸಾಧ್ಯತೆ ಇದೆ. ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿಯಲ್ಲಿ ನೀವು ಉನ್ನತ ಸ್ಥಾನವನ್ನು ಪಡೆಯಬಹುದು. ಕಚೇರಿಯ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆಯಾಗಬಹುದು.  ರಾಮನ ನೆನೆಯಿರಿ.

Advertisement. Scroll to continue reading.

ಭಯವನ್ನು ಬಿಟ್ಟರೆ ಉತ್ತಮ. ನೀವು ವಿದೇಶದಿಂದ ಸ್ನೇಹಿತರ ಸಂದೇಶಗಳನ್ನು ಸ್ವೀಕರಿಸುತ್ತೀರಿ. ಅನಾರೋಗ್ಯ ಸಮಸ್ಯೆಗೆ ವೈದ್ಯರನ್ನು ಕಾಣಿ. ಜನರನ್ನು ಮೆಚ್ಚಿಸಲು ಪ್ರಯತ್ನಿಸುವ ಮೂಲಕ ನಿಮ್ಮ ಸಂತೋಷವನ್ನು ಹಾಳು ಮಾಡಿಕೊಳ್ಳಬೇಡಿ. ಮಂಜುನಾಥನ ನೆನೆಯಿರಿ.

ಮನಸ್ಸಿನಲ್ಲಿ ಹೊಸ ಯೋಜನೆಗಳು ಹುಟ್ಟುತ್ತವೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ವಾತಾವರಣ ಇರುತ್ತದೆ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳು ನಿಮ್ಮ ಪರವಾಗಿ ಇತ್ಯರ್ಥವಾಗಬಹುದು. ನಿಮ್ಮ ಸಂಗಾತಿಯ ಬಗ್ಗೆ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ. ಶಿವನ ಆರಾಧಿಸಿ.

ಸರ್ಕಾರಿ ಕೆಲಸ ಮಾಡುವವರ ಹಕ್ಕುಗಳು ಹೆಚ್ಚಾಗುತ್ತವೆ. ಉನ್ನತ ಅಧಿಕಾರಿಗಳು ನಿಮಗೆ ಹೆಚ್ಚಿನ ಗೌರವವನ್ನು ನೀಡುತ್ತಾರೆ. ನೀವು ಭೂಮಿ ಮತ್ತು ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ವ್ಯಾಪಾರದಲ್ಲಿ ಸಾಮಾನ್ಯ ಲಾಭ ಇರುತ್ತದೆ.
ಶನೈಶ್ಚರನ ನೆನೆಯಿರಿ.

ನೀವು ಸ್ನೇಹಿತರ ಸಹಾಯ ಪಡೆಯಬಹುದು. ವಕೀಲಿಕೆಗೆ ಸಂಬಂಧಿಸಿದ ವೃತ್ತಿಯಲ್ಲಿ ಜಯವಿದೆ. ಕುಟುಂಬದಲ್ಲಿ ಸಂತೋಷ, ಶಾಂತಿ ಇರುತ್ತದೆ. ಅತಿಯಾದ ಆತ್ಮವಿಶ್ವಾಸದಿಂದ ಕೆಲಸವೂ ಹಾಳಾಗಬಹುದು. ಗಣಪನ ನೆನೆಯಿರಿ.

Advertisement. Scroll to continue reading.

ಉತ್ಸಾಹದ ಕೊರತೆ ಇರುತ್ತದೆ. ಕೆಲಸದಲ್ಲಿ ಸಹೋದ್ಯೋಗಿಗಳು ನಿಮಗೆ ಅಗೌರವ ತೋರುತ್ತಾರೆ. ವ್ಯವಹಾರದಲ್ಲಿ ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ತಾಳ್ಮೆಯಿಂದ ಇದ್ದಷ್ಟು ಉತ್ತಮ. ರಾಯರ ಆರಾಧಿಸಿ.

ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೈವಾಹಿಕ ಜೀವನದ ಒತ್ತಡ ದೂರವಾಗುತ್ತದೆ. ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ವ್ಯಾಪಾರಿಗಳು ಅಂದುಕೊಂಡ ಗುರಿ ಸಾಧಿಸಬಹುದು. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!