Connect with us

Hi, what are you looking for?

Diksoochi News

ಕ್ರೀಡೆ

ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಮಿಚೆಲ್‌ ಮಾರ್ಷ್‌ ಪೋಸ್; ಆಕ್ರೋಶ

2

ಅಹಮದಾಬಾದ್‌: ಭಾನುವಾರ ಅಹಮಾದಾಬಾದ್‌ನಲ್ಲಿ ನಡೆದಿದ್ದ 2023ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಆಸ್ಟ್ರೇಲಿಯಾ ಆರನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ವಿಶ್ವಕಪ್‌‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದ ಭಾರತ ಫೈನಲ್ ಪಂದ್ಯದಲ್ಲಿ ಎಡವಿದ್ದು, ಆಸ್ಟ್ರೇಲಿಯಾ ಗೆದ್ದು ಬೀಗಿದೆ.

ಆಸೀಸ್ ಆಟಗಾರರು ಟ್ರೋಫಿ ಜೊತೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಆದರೆ, ಮಿಚೆಲ್ ಮಾರ್ಷ್ ಸಂಭ್ರಮ ಮಾತ್ರ ಅತಿರೇಕವಾಗಿತ್ತು. ಹೌದು, ಮಿಚೆಲ್, ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಟ್ರೋಫಿಯ ಮೇಲೆ ಪಾದವನ್ನಿಟ್ಟು ಫೋಟೋ ತೆಗೆಸಿಕೊಂಡಿದ್ದಾರೆ.

Advertisement. Scroll to continue reading.

ಮಿಚೆಲ್ ಮಾರ್ಷ್ ಅವರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು, ವಿಶ್ವಕಪ್ ಟ್ರೋಫಿಯ ಮೇಲೆ ಎರಡೂ ಕಾಲುಗಳನ್ನು ಇಟ್ಟು ಸೋಫಾ ಮೇಲೆ ವಿಶ್ರಾಂತಿ ಮಾಡುವುದನ್ನು ಕಾಣಬಹುದು. ಈ ಫೋಟೋವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಇನ್ಸ್ಟಾಗ್ರಾಮಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಕ್ರಿಕೆಟ್‌ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮಿಚೆಲ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸುತ್ತಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅಂತಾರಾಷ್ಟ್ರೀಯ

0 ನವದೆಹಲಿ : ಫೇಸ್ ಬುಕ್ ಗೆಳೆಯನಿಗಾಗಿ ಪಾಕಿಸ್ತಾನಕ್ಕೆ ಹೋಗಿ ವಿವಾಹವಾಗಿದ್ದ ಅಂಜು ಇದೀಗ ಭಾರತಕ್ಕೆ ಮರಳಿದ್ದಾರೆ. ಖೈಬರ್ ಪಖ್ತುಂಖ್ವಾದಲ್ಲಿ ತನ್ನ ಪತಿ ಪಾಕಿಸ್ತಾನದ ಪ್ರಜೆ ನಸ್ರುಲ್ಲಾ ಅವರೊಂದಿಗೆ ವಾಸಿಸುತ್ತಿರುವ 34 ವರ್ಷದ...

ಜ್ಯೋತಿಷ್ಯ

0 ದಿನಾಂಕ : ೩೦-೧೧-೨೩, ವಾರ : ಗುರುವಾರ, ತಿಥಿ: ತದಿಗೆ, ನಕ್ಷತ್ರ: ಆರಿದ್ರಾ ನೀವು ಇತರರಿಗೆ ಸಹಾಯ ಮಾಡಿ ಮೆಚ್ಚುಗೆ ಪಡೆಯುತ್ತೀರಿ. ವ್ಯಾಪಾರದಲ್ಲಿ ಹೊಸ ಪಾಲುದಾರರನ್ನು ಸಿಗುತ್ತಾರೆ. ಆದಾಯದ ಮೂಲಗಳು ಹೆಚ್ಚಾಗಬಹುದು....

ಸಿನಿಮಾ

1 ಬಿಗ್ ಬಾಸ್ ಸೀಸನ್ 10ನಲ್ಲಿಜಗಳ, ಪರಸ್ಪರ ಕಿತ್ತಾಟ ಕಂಡುಬರುತ್ತಿದೆ. ಈ ಬಾರಿ ವಿನಯ್ ಹಾಗೂ ಸ್ನೇಹಿತ್ ಸಂಗಡ ಬಿಟ್ಟು ನಮ್ರತಾ ಗೌಡ ಡ್ರೋನ್ ಪ್ರತಾಪ್ ತಂಡ ಸೇರಿದ್ದರು. ಆದರೆ, ಕ್ಯಾಪ್ಟನ್ ಟಾಸ್ಕ್‍ನಲ್ಲಿ...

ರಾಜ್ಯ

2 ಬೆಂಗಳೂರು: ಯಾವುದನ್ನೂ ಉಚಿತವಾಗಿ ನೀಡಬಾರದು. ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳಿಗೆ ಖಂಡಿತಾ ನನ್ನ ವಿರೋಧವಿಲ್ಲ, ಆದರೆ ಅದನ್ನು ಉಚಿತವಾಗಿ ಪಡೆದುಕೊಂಡವರು ಸಮಾಜಕ್ಕೆ ಉಪಕಾರವಾಗುವಂತೆ ಕೆಲಸ ಮಾಡಿ ಹಿಂತಿರುಗಿ ಕೊಡಬೇಕು. ಆಗ...

ಅಂತಾರಾಷ್ಟ್ರೀಯ

1 ಬೆಂಗಳೂರು : ಕೊರೋನಾ ಎಂಬ ಮಹಾಮಾರಿ ಬಂದ ಮೇಲೆ ಆತಂಕ ಸಹಜವಾಗಿದೆ. ಹೊಸ ಹೊಸ ವೈರಸ್, ಸೋಂಕುಗಳ ಹೆಸರು ಕೇಳಿದರೇನೆ ಜನರು ಭಯಗೊಳ್ಳುತ್ತಾರೆ. ಅದರಲ್ಲೂ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿವೆ....

error: Content is protected !!