ಬ್ರಹ್ಮಾವರ: ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬುಧವಾರ ಆರೂರು ಗ್ರಾಮದಲ್ಲಿ ನಡೆದಿದೆ.
ಎಸ್.ಅಶೋಕ್(55) ಮೃತ ವ್ಯಕ್ತಿ.
ಅಶೋಕ್ ಮೇಸ್ತ್ರಿಕೆಲಸ & ಹುಲ್ಲು ಕಟ್ಟಿಂಗ್ ಕೆಲಸ ಮಾಡಿಕೊಂಡಿದ್ದು, ಆರೂರು ಗ್ರಾಮದ ಕುರುಡುಂಜಿ, ಬಬ್ಬುಸ್ವಾಮಿ ದೈವಸ್ಥಾನಕ್ಕೆ ದೀಪೋತ್ಸವದ ಪೂರ್ವ ತಯಾರಿ ಕೆಲಸ ಮಾಡಲು ಹೋಗಿದ್ದಾರೆ. ಕೆಲಸ ಮಾಡುತ್ತಿರುವ ಸಂದರ್ಭ ಸಂಜೆ ಹಠಾತ್ ಕುಸಿದು ಬಿದ್ದಿದ್ದು, ಸ್ಥಳಿಯರು ಅವರನ್ನು ಉಪಚರಿಸಿ ಆಟೋರಿಕ್ಷಾ ಮೂಲಕ ಬ್ರಹ್ಮಾವರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
Advertisement. Scroll to continue reading.
ಪರೀಕ್ಷಿಸಿದ ವೈದ್ಯರು ಎಸ್ ಅಶೋಕ್ ಕುಮಾರ್ ರವರು ಆಸ್ಪತ್ರೆಗೆ ಕರೆತರುವ ದಾರಿ ಮದ್ಯದಲ್ಲಿಯೇ ಮೃತರಾಗಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In this article:Arooru, brahmavara, death, Diksoochi news, heart attack, kurudunji, ಕುಸಿದು ಬಿದ್ದು ಸಾವು, ಬ್ರಹ್ಮಾವರ
Click to comment