ಶಿರ್ವ : ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಬೆಳಪು ಗ್ರಾಮದ ಪಣಿಯೂರು ರೈಲ್ವೆ ಸ್ಟೇಶನ್ ಬಳಿ ಡಿ.೭ ರಂದು ರಾತ್ರಿ ನಡೆದಿದೆ.
ಬಾಗಲಕೋಟೆಯ ಪ್ರಭು ಸ್ವಾಮಿ ಕಟಾಪುರ ಮಠ(೨೧) ಮೃತ ಯುವಕ.
ಅವರು ಕಳೆದ ೬ ತಿಂಗಳಿನಿAದ ಮಂಗಳೂರು ಸುರತ್ಕಲ್ನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಸುರತ್ಕಲ್ ನಿಂದ ಕಾರವಾರಕ್ಕೆ ಕೊಂಕಣ್ ಎಕ್ಸ್ಪ್ರೆಸ್ ರೈಲ್ನಲ್ಲಿ ಪ್ರಯಾಣಿಸುತ್ತಿರುವಾಗ ಪಣಿಯೂರು ರೈಲ್ವೆ ಸ್ಟೇಶನ್ ಬಳಿ ತಲುಪುವಾಗ ಆಕಸ್ಮಿಕ ರೈಲಿನಿಂದ ಬಿದ್ದಿದ್ದಾರೆ. ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Advertisement. Scroll to continue reading.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.