Connect with us

Hi, what are you looking for?

Diksoochi News

ರಾಷ್ಟ್ರೀಯ

ಊಟ ಬಡಿಸಲು ತಡ ಮಾಡಿದ್ದಕ್ಕೆ ಪತ್ನಿಯ ಶಿರಚ್ಛೇದಿಸಿದ ಪತಿ!

0

ಒಡಿಸ್ಸಾ : ಊಟ ಬಡಿಸಲು ವಿಳಂಬ ಮಾಡಿದ್ದಕ್ಕಾಗಿ ತನ್ನ ಪತ್ನಿಯ ಶಿರಚ್ಛೇದ ಮಾಡಿರುವ ಘಟನೆ ಬನಿಗೋಚ ಪ್ರದೇಶದಲ್ಲಿ ನಡೆದಿದೆ.

ಧರಿತ್ರಿ (30) ಮೃತ ಪತ್ನಿ. ಅರ್ಜುನ್ ಬಾಘಾ (35) ಕೊಲೆಗೈದ ಆರೋಪಿ. ಅರ್ಜುನ್ ವೃತ್ತಿಯಲ್ಲಿ ದಿನಗೂಲಿಯಾಗಿದ್ದು, ಸಮಯಕ್ಕೆ ಸರಿಯಾಗಿ ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ತನ್ನ ಪತ್ನಿಯ ಶಿರಚ್ಛೇದನ ಮಾಡಿದ್ದಾನೆ ಎಂದು ವರದಿಯಾಗಿದೆ.

Advertisement. Scroll to continue reading.

ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಮರಳಿದ ಅರ್ಜುನ್, ಪತ್ನಿಗೆ ಊಟ ಬಡಿಸುವಂತೆ ಕೇಳಿಕೊಂಡಿದ್ದಾನೆ. ಧರಿತ್ರಿ ತನ್ನ ಪುಟ್ಟ ಮಗನಿಗೆ ಆಹಾರ ನೀಡುವುದರಲ್ಲಿ ನಿರತಳಾಗಿದ್ದರಿಂದ, ಅವಳು ಅವನನ್ನು ಕಾಯುವಂತೆ ಹೇಳಿದ್ದಾಳೆ. ಆದಾಗ್ಯೂ, ಹಸಿದ ಅರ್ಜುನನು ತನ್ನ ತಾಳ್ಮೆ ಕಳೆದುಕೊಂಡು ಅವಳನ್ನು ಅವಾಚ್ಯವಾಗಿ ನಿಂದಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ನಡುವೆ ತೀವ್ರ ವಾಗ್ವಾದ ನಡೆದಿದೆ.

ಬಳಿಕ ಜಗಳ ವಿಕೋಪಕ್ಕೆ ತಿರುಗಿ,ಅರ್ಜುನ್, ಧರಿತ್ರಿ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಪತ್ನಿಯ ಶಿರಚ್ಛೇದ ಮಾಡಿ ಕೊಂದಿದ್ದಾನೆ. ನಂತರ ಆಕೆಯ ತುಂಡರಿಸಿದ ತಲೆಯನ್ನು ಗೋಣಿಚೀಲದಲ್ಲಿ ತುಂಬಿ ಬನಿಗೋಚಾ ಪೊಲೀಸ್ ಠಾಣೆಗೆ ಬಂದಿದ್ದಾನೆ. ತನ್ನ ಅಪರಾಧವನ್ನು ಒಪ್ಪಿಕೊಂಡು ಪೊಲೀಸರ ಮುಂದೆ ಶರಣಾಗಿದ್ದಾನೆ. ಪೊಲೀಸರು ಅರ್ಜುನ್ ನನ್ನು ಬಂಧಿಸಿದ್ದು, ಕೂಡಲೇ ಕಂಕಣಮೆಂಡಿ ಗ್ರಾಮಕ್ಕೆ ತೆರಳಿ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.

ಧರಿತ್ರಿಯ ತಲೆ ಇಲ್ಲದ ದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬನಿಗೋಚ ಐಐಸಿ ಲಕ್ಷ್ಮಣ್ ದಂಡಸೇನ ತಿಳಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!