ಉಡುಪಿ: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪರ್ಯಾಯಪೂರ್ವ ತೀರ್ಥಕ್ಷೇತ್ರಗಳ ಸಂದರ್ಶನ ಮುಗಿಸಿ ಸೋಮವಾರ ಸಂಜೆ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಜತೆಯಲ್ಲಿ ಉಡುಪಿ ಪುರಪ್ರವೇಶ ಮಾಡಿದ್ದಾರೆ.
ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದರು. ಊರ ಪರವೂರ ಗಣ್ಯರು ಅವರನ್ನು ಸ್ವಾಗತಿಸಿದರು. ಬಳಿಕ ಜೋಡುಕಟ್ಟೆಯಿಂದ ಅಲಂಕೃತ ವಾಹನದಲ್ಲಿ ವೈಭವದ ಮೆರವಣಿಗೆಯಿಂದ ಶ್ರೀ ಕೃಷ್ಣಮಠದವರೆಗೆ ಬರಮಾಡಿಕೊಳ್ಳಲಾಯಿತು.
Advertisement. Scroll to continue reading.
ಕೆ. ಎಂ. ಮಾರ್ಗ, ತ್ರಿವೇಣಿ ವೃತ್ತ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆ ಮೂಲಕ ಮೆರವಣಿಗೆ ಸಾಗಿ ಬಂದು ರಥಬೀದಿ ಪ್ರವೇಶಿಸಿತು.
ಜಾನಪದ, ಸಾಂಸ್ಕೃತಿಕ, ವೇದ ವಾದ್ಯ ಘೋಷ, ವಿವಿಧ ಭಜನ ತಂಡಗಳು, ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಅನಂತೇಶ್ವರ, ಚಂದ್ರಮೌಳೀಶ್ವರ, ಶ್ರೀ ಕೃಷ್ಣ ಮುಖ್ಯಪ್ರಾಣ ದರ್ಶನ ಪಡೆದ ಬಳಿಕ ಶ್ರೀಪಾದರು ಪುತ್ತಿಗೆ ಮಠ ಪ್ರವೇಶಿಸಿದರು.
Advertisement. Scroll to continue reading.
In this article:paryaya, puttige matha, puttige shree, udupi Krishnamut, ಪರ್ಯಾಯ, ಪುತ್ತಿಗೆ ಶ್ರೀ, ಪುರಪ್ರವೇಶ
Click to comment